- ವಕೀಲರಾದ ಶಿವಕುಮಾರ್ ಗೌಡ, ತೇಜಸ್ವಿ ಆಪ್ಗೆ ಸೇರ್ಪಡೆ
- ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಸಮ್ಮುಖದಲ್ಲಿ
ಕನ್ನಡಿಗರಾದ ಇಬ್ಬರು ಸುಪ್ರೀಂಕೋರ್ಟ್ ವಕೀಲರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ಮತ್ತು ದೆಹಲಿ ಶಾಸಕ ದಿಲೀಪ್ ಪಾಂಡೆ ಸಮ್ಮುಖದಲ್ಲಿ ಶಿವಕುಮಾರ್ ಗೌಡ ಹಾಗೂ ಐ ಎಸ್ ತೇಜಸ್ವಿ ಪಕ್ಷ ಸೇರ್ಪಡೆಗೊಂಡಿದ್ದಾರೆ ಎಂದು ಎಎಪಿ ಹೇಳಿಕೆ ನೀಡಿದೆ.
ತೀರ್ಥಹಳ್ಳಿಯ ಮೂಲದ ಸುಪ್ರೀಂಕೋರ್ಟ್ ವಕೀಲ ಶಿವಕುಮಾರ್ ಗೌಡ ಅವರು 14 ವರ್ಷಗಳಿಂದ ಕರ್ನಾಟಕ ಮತ್ತು ದೆಹಲಿ ಹೈಕೋರ್ಟ್ ಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟೂರಿನಲ್ಲಿ ಟಿಇಎಸ್ ಪ್ರತಿಷ್ಠಾನ ಸ್ಥಾಪಿಸಿ ಅಲ್ಲಿನ ಜನರಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಹಾಯ ಮಾಡಿಕೊಂಡು ಬಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂದರ್ಶನ| ರಾಜ್ಯದ ಯಾವೊಬ್ಬ ರಾಜಕಾರಣಿಯೂ ಪ್ರಾಮಾಣಿಕನಲ್ಲ: ಭಾಸ್ಕರ್ ರಾವ್
ಮತ್ತೊಬ್ಬ ಪ್ರತಿಭಾನ್ವಿತ ವಕೀಲ, ಚಿಕ್ಕಮಗಳೂರಿನ ಮಾಜಿ ಶಾಸಕ ಐ ಬಿ ಶಂಕರ್ ಅವರ ಪುತ್ರ ಐ ಎಸ್ ತೇಜಸ್ವಿ ಕೂಡ ಇದೇ ಸಂದರ್ಭದಲ್ಲಿ ಆಪ್ ಸೇರ್ಪಡೆಗೊಂಡಿದ್ದಾರೆ ಎಂದು ಪಕ್ಷದ ವಕ್ತಾರ ಜಗದೀಶ್ ವಿ ಸದಂ ತಿಳಿಸಿದ್ದಾರೆ.

