ವಿಜಯಪುರದ ಕೆ.ಆರ್.ಐ.ಡಿ.ಎಲ್ ಇಲಾಖೆಯ ಗುತ್ತಿಗೆದಾರ ಎಂಜಿನಿಯರ್ ಪ್ರತಿ ಕಾಮಗಾರಿಯುಲ್ಲಿಯು 4% ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವದಿಯಲ್ಲಿ 40% ಕಮಿಷನ್ ಆರೋಪ ಕೇಳಿ ಬಂದಿತ್ತು. ಆದರೆ, ಇಲ್ಲೊಬ್ಬ ಮಾತ್ರ 4% ಕಮೀಷನ್ ಪಡೆಯುತ್ತಿದ್ದಾನೆ ಎಂದು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಮಿಷನ್ ಪಡೆದಿರುವುದನ್ನು ಒಪ್ಪಿಕೊಂಡಿರುವ ಆಡಿಯೋ ವೈರಲ್ ಆಗಿದೆ.
ವಿಜಯಪುರದ ಕೆ.ಆರ್.ಐ.ಡಿ.ಎಲ್ (ಕರ್ನಾಟಕ ಗ್ರಾಮೀಣ ಮೂಲ ಸೌಕಾರ್ಯ ಅಭಿವೃದ್ಧಿ ನಿಯಮಿತ) ಇಲಾಖೆಯ ಗುತ್ತಿಗೆದಾರ ಎಂಜಿನಿಯರ್ ಶಿವನಗೌಡ ಬಿರಾದಾರ ವಿರುದ್ಧವೇ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವುದು. ಪ್ರತಿ ಕಾಮಗಾರಿಯುಲ್ಲಿಯು ಎಂಜಿನಿಯರ್ಗೆ 4% ಕಮಿಷನ್ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆ, ಇಲ್ಲವಾದರೆ ಗುತ್ತಿಗೆದಾರ ಇವರ ಕಚೇರಿಗೆ ಅಲೆಯಬೇಕಾಗುತ್ತದೆ.
ಇನ್ನು ಹಲವು ಕಾಮಗಾರಿಯಲ್ಲಿ ಗುತ್ತಿಗೆದಾರರ ಜೊತೆ ಪಾಲುದಾರರಾಗಿ ಕೆಲಸ ಮಾಡಿ ಹಣ ತೆಗೆಯುತ್ತಿದ್ದಾನೆ. ಆತನೆ ಒಪ್ಪಿಕೊಂಡ ಕಾಲ್ ರೆಕಾರ್ಡ್ ಈಗ ವ್ಯರಲ್ ಆಗಿದೆ. ಗುತ್ತಿಗೆದಾರರ ಜೊತೆ ಮಾತನಾಡಿ ತನ್ನ 4% ಕಮೀಷನ್ ದಂಧೆ ಬಯಲಾಗಿದೆ. ಎಂಜಿನಿಯರ್ ಜೊತೆಗೆ ಇಲಾಖೆಯ ಮೇಲಧಿಕಾರಿಗಳೂ ಶಾಮೀಲು ಆಗಿರುವ ಆರೋಪವು ಇದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬೆಂಬಲ ಬೆಲೆ ರಾಗಿ ಖರೀದಿ ಹಣ ಪಾವತಿ ವಿಳಂಬ; ರೈತ ಸಂಘ ಆಕ್ರೋಶ