70ರ ದಶಕದ ಅಂದಿನ ದಲಿತ ಚಳವಳಿಯ ಹೋರಾಟ ಎಂದಿಗೂ ನಮಗೆ ಸ್ಪೋರ್ತಿದಾಯಕ. ಜಿಲ್ಲೆಯ ತಳಸಮುದಾಯಗಳನ್ನು ಒಂದಡೆ ಸೇರಿಸಿ ಅವರಿಗೆ ಹೋರಾಟದ ದಾರಿಯನ್ನು ತೋರಿಸಿ, ಎಚ್ಚರಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ನಾಯಕ ಪರಶುರಾಮ ನಿಲಾನಾಯಕ ಹೇಳಿದರು.
ದಲಿತ ಸಂಘರ್ಷ ಸಮೀತಿ (ಭೀಮವಾದ) ಜಿಲ್ಲಾ ಸಮಿತಿಯು ಬಾಗಲಕೋಟೆಯ ನವನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ದಲಿತ ಚಳುವಳಿಗೆ ಅಡಿಪಾಯ ಹಾಕಿದ ಕೀರ್ತಿ ರಾಜ್ಯದ ನಮ್ಮ ನಿಮ್ಮಲ್ಲೆರ ನಾಯಕ ಪ್ರೊ. ಬಿ.ಕೃಷ್ಣಪ್ಪರವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಅವರ ಜೊತೆಗೂಡಿ ಅನೇಕ ಹಿರಿಯರು ಹೋರಾಟಗಾರರು ಅನ್ನ ಆಹಾರವಿಲ್ಲೆದೆ ಹಳ್ಳಿಹಳ್ಳಿಗೆ ಬೇಟಿನೀಡಿ ದಲಿತರ ಸಮಸ್ಯೆಗಳನ್ನು ಆಲಿಸಿ, ಅರಿತು ಹೊರಟದ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತ ಬಂದರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.
ಬಾಗಲಕೋಟ ಜಿಲ್ಲೆಯ ಎಲ್ಲಾ ತಾಲೂಕು ಮುಖಂಡರು ಬಂದಿದ್ದಿರಿ ಪ್ರೊ. ಬಿ.ಕೃಷ್ಣಪ್ಪರವರು ವಿಚಾರಗಳನ್ನು ಗಲ್ಲಿ ಗಲ್ಲಿಗೆ ತಲುಪಿಸುವ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕಾರ್ಯಕರ್ತರಿಗೆ ಹೇಳಿದರು.
ದಲಿತ ಸಂಘರ್ಷ ಸಮೀತಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದವರಿಗೆ ಸಾಮೂಹಿಕ ಮದುವೆಗಳನ್ನು ಕಳೆದ 14 ವರ್ಷಗಳಿಂದ ಮಾಡುತ್ತ ಬರುತ್ತಿದೆ. ಈ ವರ್ಷ ವು ಅತ್ಯಂತ ಯಶಸ್ವಿಯಾಗಿ ನೆರೆವೆರಿಸೋಣ ಎಂದ ಅವರು, ಬರುವ ಏಪ್ರಿಲ್ 14, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ನಾವೆಲ್ಲರೂ ಸೇರಿ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ದುಂಡುವಯ್ಯ, ಡಿ. ಸಿದ್ದುರಾಜ, ಪ್ರಕಾಶ, ಶ್ಯಾಮ್ ಕಾಳೆ, ಯಲ್ಲಪ್ಪ ಹಳೆಮನಿ, ಕಲ್ಲಪ್ಪ ಚನ್ನವರ, ಪಡಿಯಪ್ಪ ಕಳ್ಳಿಮನಿ, ಸಂಜು ಕರೆನ್ನವರ, ಶಿವಶರಣಪ್ಪ ವಾಡಿ, ಕೆ. ನಾಗರಾಜ್ ಇತರರು ಉಪಸ್ಥಿತರಿದ್ದರು.