- ಇಂದಿರಾ ಕ್ಯಾಂಟೀನ್ ನಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಇಲ್ಲ.
- ಸ್ವಲ್ಪ ಮಳೆ ಬಂದರೆ ಕಟ್ಟಡದ ಮೇಲ್ಛಾವಣಿ ಸೋರುತ್ತದೆ
ಬೀದರ್ ನಗರದ ಸರ್ಕಾರಿ ಬೀಮ್ಸ್ ಆಸ್ಪತ್ರೆ ಮುಂಭಾಗದ ಇಂದಿರಾ ಕ್ಯಾಂಟೀನ್ ನಲ್ಲಿ ಮೂಲಭೂತ ಸೌಕರ್ಯ ಕೊರತೆಯಿದ್ದು, ಸಾರ್ವಜನಿಕರಿಗೆ ಗುಣಮಟ್ಟ ಆಹಾರ ಒದಗಿಸುತ್ತಿಲ್ಲ ಎಂದು ಭೀಮ್ ಆರ್ಮಿ ಜಿಲ್ಲಾ ಗೌರವಾಧ್ಯಕ್ಷ ಘಾಳೆಪ್ಪಾ ಲಾಧಾಕರ್ ಆರೋಪಿದರು.
“ಬ್ರಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾತಿತಿ ದರದಲ್ಲಿ ಉಪಾಹಾರ ಒದಗಿಸಲು ಆರಂಭಿಸಿದ ಇಂದಿರಾ ಕ್ಯಾಂಟೀನ್ ನಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ರುಚಿಕರವಾಸ ಗುಣಮುಟ್ಟ ಆಹಾರ ನೀಡದೇ ʼನಾಮ್ ಕೇ ವಾಸ್ತೆʼ ತೆರದಿಡಲಾಗುತ್ತಿದೆ” ಎಂದು ಅವರು ದೂರಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದಶಕ ಕಳೆದರೂ ಈ ಊರಿನ ರಸ್ತೆಗಿಲ್ಲ ದುರಸ್ತಿ ಭಾಗ್ಯ; ನಿತ್ಯ ಸಂಕಟದಲ್ಲಿ ಗ್ರಾಮಸ್ಥರು
” ಸ್ವಲ್ಪ ಮಳೆ ಬಂದರೆ ಕಟ್ಟಡದ ಮೇಲ್ಛಾವಣಿ ಸೋರುತ್ತದೆ, ಕ್ಯಾಂಟೀನ್ ತುಂಬಾ ಮಳೆ ನೀರು ಸಂಗ್ರಹವಾಗಿ ಗಬ್ಬು ನಾರುತ್ತಿದೆ, ಇನ್ನು ಕ್ಯಾಂಟೀನ್ ಪಕ್ಕದಲ್ಲೇ ಸಾರ್ವಜನಿಕ ಶೌಚಾಲಯ ಇರುವ ಕಾರಣದಿಂದ ಉಪಹಾರ ಸೇವಿಸಲು ಬರುವರಿಗೆ ರೋಗದ ಭೀತಿ ಎದುರಾಗುತ್ತಿದೆ. ಇಂಥ ಅವ್ಯಸ್ಥೆಯ ಇಂದಿರಾ ಕ್ಯಾಂಟೀನ್ ನಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಗುಣಮಟ್ಟ ಆಹಾರ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು” ಎಂದು ನಗರಸಭೆ, ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.