ನಕಲಿ ಸುದ್ದಿ ಹರಡಲು ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ಮಾಸಿಕ 50 ಸಾವಿರ ರೂ. ವೇತನ!

Date:

ಸಿಂಗಾಪುರ ಮೂಲದ ಮಾಧ್ಯಮ ನ್ಯೂಸ್ ಏಷ್ಯಾ ಸಾಕ್ಷ್ಯಚಿತ್ರ (documentary) ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಕಲಿ ಸುದ್ದಿ ಹರಡಲು ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ಮಾಸಿಕ 50 ಸಾವಿರ ರೂಪಾಯಿ ನೀಡಲಾಗುತ್ತದೆ ಎಂಬ ವಿಚಾರ ಬಹಿರಂಗವಾಗಿದೆ.

ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಬಿಜೆಪಿ ಐಟಿ ಸೆಲ್‌ನ ಫ್ರೀಲಾನ್ಸರ್‌ ಅನಿಲ್ ಕುಮಾರ್, “ಬಿಜೆಪಿ ಐಟಿ ಸೆಲ್ ಮಾಹಿತಿಗಳನ್ನು ಹರಡುವ ಕೆಲಸ ಮಾಡುತ್ತದೆ. ನಾನು ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮನ್ನು ಯಾವುದೇ ಏಜೆನ್ಸಿ ನೇಮಕಾತಿ ಮಾಡುವುದಿಲ್ಲ. ಚುನಾವಣೆ ಬಂದಾಗ ಅಭ್ಯರ್ಥಿಗಳೇ ನಮ್ಮನ್ನು ಫ್ರೀಲಾನ್ಸರ್ ಆಗಿ ನೇಮಿಸುತ್ತಾರೆ. ಮಾಸಿಕವಾಗಿ ನಮಗೆ 40-50 ಸಾವಿರ ವೇತನ ಸಿಗುತ್ತದೆ” ಎಂದು ಹೇಳಿದ್ದಾರೆ.

ರಾಜಸ್ಥಾನದ ನಿಂಬಹೇರ ಎಂಬ ಸಣ್ಣ ಪಟ್ಟಣದಲ್ಲಿ ನ್ಯೂಸ್ ಏಷ್ಯಾ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಮಾಡಲು ಫ್ರೀಲಾನ್ಸರ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ರಾಜಕೀಯ ಪಕ್ಷಗಳು ತಮ್ಮ ಅಜೆಂಡಾವನ್ನು ಹರಡಲು ಸಾವಿರಾರು ಮಂದಿಯನ್ನು ನೇಮಿಸುತ್ತದೆ. ಜೊತೆಗೆ ಈ ಐಟಿ ಸೆಲ್ ಉದ್ಯೋಗಿಗಳು ಬೇರೆ ಬೇರೆ ಪ್ರದೇಶಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಬೇಕಾದ ವಸತಿ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತದೆ ಎಂದು ಈ ಸಾಕ್ಷ್ಯಚಿತ್ರ ಹೇಳುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಪಕ್ಷವೊಂದರ ಬಗ್ಗೆ ಪ್ರಚಾರದ ನಕಲಿ ವಿಡಿಯೋ: ಪ್ರಕರಣ ದಾಖಲಿಸಿದ ಅಮೀರ್ ಖಾನ್

“ನಮಗೆ ಮೋದಿ ಅವರು ಮಾಡಿದ ಘೋಷಣೆಗಳು, ರಾಷ್ಟ್ರವಾದ ಮತ್ತು ಹಿಂದುತ್ವ – ಪ್ರಮುಖ ಪ್ರಚಾರ ವಿಷಯಗಳಾಗಿರುತ್ತದೆ. ನಮ್ಮಲ್ಲಿ ಎಡಿಟರ್‌ಗಳು, ಸ್ಕ್ರಿಪ್ಟ್ ರೈಟರ್ (Script Writer), ನಟರನ್ನು ನಾವು ಹೊರಗಿನಿಂದ ಕರೆಸಿಕೊಳ್ಳುತ್ತೇವೆ. ಸಂಪೂರ್ಣ ಸ್ಕ್ರಿಪ್ಟ್ ಬರೆದು ನಾವು ನಟನೆ ಮಾಡಿಸುತ್ತೇವೆ” ಎಂದು ಅನಿಲ್ ಕುಮಾರ್ ಹೇಳುತ್ತಾರೆ.

ಇನ್ನು ಈ ಸಾಕ್ಷ್ಯಚಿತ್ರದಲ್ಲಿ ಅನಿಲ್ ಕುಮಾರ್‌ನಂತಹ ಬಿಜೆಪಿ ಐಟಿ ಸೆಲ್ ಉದ್ಯೋಗಿಗಳು ಹೇಗೆ ವಿಪಕ್ಷಗಳ ವಿರುದ್ಧ ನಕಲಿ ಸುದ್ದಿಯನ್ನು, ವಿಡಿಯೋವನ್ನು ಸೃಷ್ಟಿಸುತ್ತಾರೆ ಎಂಬುವುದನ್ನು ತೋರಿಸಲಾಗಿದೆ.

“ಬಿಜೆಪಿ ಐಟಿ ಸೆಲ್‌ನಲ್ಲಿ ಕಾಮೆಂಟ್‌ಗಳನ್ನು ಮಾಡಲೆಂದೇ ಒಂದು ತಂಡ ಇರುತ್ತದೆ. ಈ ತಂಡದ ಮುಖ್ಯ ಕಾರ್ಯ ಅಪಮಾನ ಮಾಡುವುದೇ ಆಗಿರುತ್ತದೆ. ವಿಪಕ್ಷಗಳು ಯಾವುದೇ ಪೋಸ್ಟ್ ಮಾಡಿದರೂ ಅವರ ಪೋಸ್ಟ್‌ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುವುದು ಆ ತಂಡದ ಕೆಲಸವಾಗಿದೆ” ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

ಇದನ್ನು ಓದಿದ್ದೀರಾ?  ಮುಸ್ಲಿಮರ ಓಟು ಸಾಕು‌; ಸಿಎಂ ಸಿದ್ದರಾಮಯ್ಯ ವಿರುದ್ಧ ‘ಸುಳ್ಳು ಸುದ್ದಿ’ ಹರಿಬಿಟ್ಟ ಕಿಡಿಗೇಡಿಗಳು

ಇನ್ನು ಬಿಜೆಪಿ ಐಟಿ ಸೆಲ್‌ನ ಈ ಉದ್ಯೋಗಿಗಳಿಗೆ ಯಾರು ಗುರಿ ಎನ್ನುವುದನ್ನು ಕೂಡಾ ಅನಿಲ್ ಕುಮಾರ್ ಈ ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ. “ಖಂಡಿತವಾಗಿಯೂ ನಮಗೆ ಕಾಂಗ್ರೆಸ್ ಟಾರ್ಗೆಟ್ ಆಗಿರುತ್ತದೆ. ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ನಾವು ಕಾರ್ಟೂನ್‌ಗಳನ್ನು ರಚಿಸುತ್ತೇವೆ. ಮೀಮ್ಸ್‌ ಮಾಡುತ್ತೇವೆ. ಜನರಿಗೆ ನಾವು ಕಾರ್ಟೂನ್‌ಗಳನ್ನು ಬಳಸಿಕೊಂಡು ಮೀಮ್ಸ್ ಮಾಡಿದರೆ ಅದು ಇಷ್ಟವಾಗುತ್ತದೆ. ಅದಕ್ಕಾಗಿ ಅದನ್ನೇ ಬಳಸಲಾಗುತ್ತದೆ” ಎಂದು ಅವರು ಹೇಳುತ್ತಾರೆ.

ಭಾರತದಲ್ಲಿ ನಕಲಿ ಸುದ್ದಿಯೇ ಒಂದು ಇಂಡಸ್ಟ್ರಿ!

ಇನ್ನು 2019ರಲ್ಲಿ ಬಿಜೆಪಿಯು ಉತ್ತರ ಪ್ರದೇಶ ಒಂದು ರಾಜ್ಯದಲ್ಲೇ ಎರಡು ಸಾವಿರ ಸೈಬರ್ ವಾರಿಯರ್‌ಗಳನ್ನು ನೇಮಿಸುವ ಯೋಜನೆ ರೂಪಿಸಿಕೊಂಡಿತ್ತು. 2019ರಲ್ಲಿ ಫೇಸ್‌ಬುಕ್ ಕಾಂಗ್ರೆಸ್ ಹಾಗೂ ಬಿಜೆಪಿಯ ಪರವಾಗಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಸುಮಾರು 700 ಪೇಜ್‌ಗಳನ್ನು ಬ್ಲಾಕ್ ಮಾಡಿದೆ. ಭಾರತದಲ್ಲಿ ನಕಲಿ ಸುದ್ದಿಯೇ ಒಂದು ಇಂಡಸ್ಟ್ರಿಯಾಗಿದೆ ಎಂದು ವರದಿ ಹೇಳುತ್ತದೆ.

ಇದನ್ನು ಓದಿದ್ದೀರಾ?  ಜೆಎನ್‌ಯುವಿನಲ್ಲಿ ಎಬಿವಿಪಿ ಕ್ಲೀನ್‌ಸ್ವೀಪ್ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್!

15 ವರ್ಷಗಳ ಕಾಲ ನಡೆಸಿದ ತನಿಖೆಯ ಪ್ರಕಾರ 2005ರಿಂದ ಈವರೆಗೆ ಭಾರತದಲ್ಲಿ 750ಕ್ಕೂ ಅಧಿಕ ನಕಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದೆ. ಇದು 116 ರಾಷ್ಟ್ರಗಳಲ್ಲಿ ಪಸರಿಸಿದೆ. ಇವೆಲ್ಲವೂ ಕೂಡಾ ನಕಲಿ ಸುದ್ದಿಗಳನ್ನು ಹರಡುತ್ತಿದೆ ಎಂದು ವರದಿ ಹೇಳುತ್ತದೆ.

ಇನ್ನು 2024 ರ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳಿಗೆ ಮುಂಚಿತವಾಗಿ, 30 ಲಕ್ಷ ಸಾಮಾಜಿಕ ಮಾಧ್ಯಮ ಕಾರ್ಯಕರ್ತರ ಐಟಿ ಸೆಲ್ ಅನ್ನು ಆರಂಭಿಸಲು ಈ ಹಿಂದೆಯೇ ಮಹಾರಾಷ್ಟ್ರ ಬಿಜೆಪಿ ನಿರ್ಧರಿಸಿದೆ ಎಂದು ಕಳೆದ ವರ್ಷ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಾರೆನ್ಸ್ ಬಿಷ್ಣೋಯ್ ಹೆಸರಲ್ಲಿ ಕ್ಯಾಬ್ ಬುಕ್ ಮಾಡಿ ಸಲ್ಮಾನ್ ಖಾನ್ ನಿವಾಸಕ್ಕೆ ಕಳುಹಿಸಿದ ವ್ಯಕ್ತಿ ಬಂಧನ

ಜೈಲಿನಲ್ಲಿರುವ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿ ಇಲ್ಲಿನ...

ಬಿಜೆಪಿಯ ‘400 ಪಾರ್’ ಸಿನಿಮಾ ಮತದಾನದ ಮೊದಲ ದಿನವೇ ಫ್ಲಾಪ್: ತೇಜಸ್ವಿ ಯಾದವ್ ವ್ಯಂಗ್ಯ

"ಲೋಕಸಭೆ ಚುನಾವಣೆಯ ಮೊದಲ ಹಂತದ ಬಗ್ಗೆ ಮಾತನಾಡಿದ ರಾಷ್ಟ್ರೀಯ ಜನತಾ ದಳ...

ಲೋಕಸಭೆ ಚುನಾವಣೆ| ಬಿಜೆಪಿ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್‌ ಪುನರುಜ್ಜೀವನ; ನಿರ್ಮಲಾ ಸೀತಾರಾಮನ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಧ್ಯಸ್ಥಗಾರರೊಂದಿಗೆ ಸರಿಯಾದ ಸಮಾಲೋಚನೆಯ ನಂತರ...

ಛತ್ತೀಸ್‌ಗಢ| ಬಸ್ತಾರ್‌ ಮತಗಟ್ಟೆ ಬಳಿ ಸ್ಫೋಟ: ಸಿಆರ್‌ಪಿಎಫ್ ಯೋಧ ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಮತಗಟ್ಟೆಯೊಂದರ ಬಳಿ ಶುಕ್ರವಾರ ನಡೆದ ಐಇಡಿ ಸ್ಫೋಟದಲ್ಲಿ...