ಉತ್ತರಾಖಂಡದ ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಜೀವ ಉಳಿಸಿದ್ದ ‘ಇಲಿ ಬಿಲ ಗಣಿಗಾರಿಕೆ’ (ರ್ಯಾಟ್ ಹೋಲ್ ಮೈನಿಂಗ್) ತಂತ್ರಗಾರಿಕೆ ಮೂಲಕ ರಂಧ್ರ ಕೊರೆಯುವ ಗುಂಪಿನ ನೇತೃತ್ವ ವಹಿಸಿದ್ದ ವಕೀಲ್ ಹಸನ್ ಅವರ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ.
ಅಕ್ರಮ ಒತ್ತುವರಿಯ ನೆಪವೊಡ್ಡಿ ಫೆಬ್ರವರಿ 28ರ ಬುಧವಾರದಂದು ಡಿಡಿಎ ಅಧಿಕಾರಿಗಳು ಬುಲ್ಡೋಜರ್ ಅನ್ನು ತಂದು ವಕೀಲ್ ಹಸನ್ ಅವರ ಮನೆಯನ್ನು ಕೆಡವಿದ್ದಾರೆ. ಅವರ ಮನೆಯನ್ನು ಧ್ವಂಸಗೊಳಿಸಿದಾಗ ಹಸನ್ ಅವರನ್ನು ಪೊಲೀಸರು ಬಂಧಿಸಿದ್ದರು ಎಂದು ತಿಳಿದುಬಂದಿದೆ.
उत्तरकाशी में 41 मजदूरों की जान बचाने वाले रेट माइनर वकील हसन के घर को बुलडोजर से तोड़ दिया गया ,
वकील हसन ने देश के लिए इतना कुछ किया और सरकार ने उसका इनाम घर पर बुलडोजर से तोड़कर दिया , pic.twitter.com/vxOz80UjfL
— Nargis Bano (@NargisBano70) February 28, 2024
“ಮನೆ ಕೆಡಹುವ ಮುನ್ನ ಡಿಡಿಎ ನನಗೆ ಯಾವುದೇ ನೋಟಿಸ್ ನೀಡಿರಲಿಲ್ಲ ಎಂದು ಹಸನ್ ತಿಳಿಸಿದ್ದು, “ಉತ್ತರಾಖಂಡದ ಕಾರ್ಮಿಕರನ್ನು ರಕ್ಷಿಸಿದಾಗ ನನಗೆ ಕೋಟಿ ರೂಪಾಯಿಯ ಬಹುಮಾನ ಘೋಷಿಸಿದ್ದರು. ಆದರೆ ನನಗೆ ನನ್ನ ಮನೆಯನ್ನು ಮಾತ್ರ ಬಹುಮಾನವಾಗಿ ನೀಡಿ ಎಂದು ಕೇಳಿದ್ದೆ. ಅದನ್ನು ನೀಡುವ ಬದಲಾಗಿ, ಡಿಡಿಎ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ನನ್ನ ಮನೆಯನ್ನು ಕೆಡವಿದ್ದಾರೆ” ಎಂದು ದೆಹಲಿಯಲ್ಲಿ ರಾಕ್ವೆಲ್ ಎಂಟರ್ಪ್ರೈಸಸ್ ಎಂಬ ರಾಟ್ ಹೋಲ್(Rat Miner) ಮೈನಿಂಗ್ ಸಂಸ್ಥೆ ನಡೆಸುತ್ತಿರುವ ವಕೀಲ್ ಹಸನ್ ತಿಳಿಸಿದ್ದಾರೆ.
The story that should be making the headlines across channels. If this doesn’t wake up the conscience of our rich, powerful and famous (and the media), nothing will. Uttarakhand tunnel rescue rat miner hero house demolished by DDA, his kids are having dinner tonight on street… https://t.co/KQqRN5hOKe
— Rajdeep Sardesai (@sardesairajdeep) February 28, 2024
ಕಳೆದ ವರ್ಷ ನವೆಂಬರ್ 15ರಂದು ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸುವ ಎಲ್ಲ ಪ್ರಯತ್ನಗಳು ಫಲಪ್ರದವಾಗದಿದ್ದಾಗ, ಹಸನ್ ಮತ್ತವರ ಇಲಿ ಗಣಿಗಾರರ ತಂಡವನ್ನು ಸಿಲ್ಕ್ಯಾರಾಕ್ಕೆ ಕರೆಸಲಾಗಿತ್ತು. ಇವರ ತಂಡದ ನಿರಂತರ ಶ್ರಮದ ಫಲವಾಗಿ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿತ್ತು. 17 ದಿನಗಳ ನಂತರ ಕಾರ್ಮಿಕರು ಹೊರ ಬಂದಿದ್ದರು.
ಈ ಪ್ರಯತ್ನಕ್ಕೆ ಇವರ ತಂಡವನ್ನು ಇಡೀ ದೇಶವೇ ಕೊಂಡಾಡಿತ್ತು. ಇವರ ಶ್ರಮಕ್ಕೆ ಉತ್ತರಾಖಂಡದ ಮುಖ್ಯಮಂತ್ರಿ ಪರಿಹಾರ ಮೊತ್ತವನ್ನು ಘೋಷಿಸಿದ್ದರು. ಇದನ್ನು ಸ್ವೀಕರಿಸಲು ನಿರಾಕರಿಸಿದ್ದ ವಕೀಲ್ ಹಸನ್ ಅವರ ತಂಡ, “ನಾವು ದೇಶದ ಸೇವೆ ಮಾಡಿದ್ದೇವೆ. ಅದಕ್ಕಾಗಿ ನಮಗೆ ಹಣ ಬೇಡ” ಎಂದು ಮೊತ್ತವನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು. ಅಂದು ಹೀರೋ ಆಗಿದ್ದ ವ್ಯಕ್ತಿ, ಇಂದು ಮನೆ ಕಳೆದುಕೊಂಡು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ.
Tragic & shameful. The valiant Wakeel Hassan the rat miner who with his team rescued 41 workers trapped in the Uttarkashi’s Silkyara tunnel , drilling by hand to get to the trapped men, today has his home demolished. Once feted as a hero today he is homeless after a DDA… pic.twitter.com/ra6k5kMuu1
— Sagarika Ghose (@sagarikaghose) February 28, 2024
ಈ ಘಟನೆಯನ್ನು ಖಂಡಿಸಿರುವ ಟಿಎಂಸಿಯ ರಾಜ್ಯಸಭಾ ಸಂಸದೆ ಸಾಗರಿಕಾ ಘೋಸ್ಮ ಇದೊಂದು ನಿಜಕ್ಕೂ ದುರಂತ ಮತ್ತು ನಾಚಿಕೆಗೇಡು ಎಂದು ಆಕ್ರೋಶ ಹೊರಹಾಕಿದ್ದಾರೆ.