ತನ್ನ ಅಪ್ರಾಪ್ತ ಮಗಳಿಗೆ ನಿಶ್ಚಯವಾಗಿದ್ದ ಬಾಲ್ಯವಿವಾಹವನ್ನು ತಡೆಯಲು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿದ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಚಿನ್ನ ವೆಲ್ಲಮಿಲ್ಲಿ ಗ್ರಾಮದಲ್ಲಿ ನಡೆದಿದೆ.
“ಬಾಲಕಿಯ ತಂದೆ-ತಾಯಿ ಕೆಲವು ವರ್ಷಗಳ ಹಿಂದೆ ವಿಚ್ಛೆದನ ಪಡೆದು, ಬೇರ್ಪಟ್ಟಿದ್ದರು. ಬಾಲಕಿಯ ಬಾಯಿ ಮಾರ್ಚ್ 24ರಂದು ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದರು. ವಿವಾಹದ ಬಗ್ಗೆ ತಿಳಿದ ತಂದೆ, ಮದುವೆಯನ್ನು ನಿಲ್ಲಿಸಲು ಮೊಬೈಲ್ ಟವರ್ ಏರಿದ್ದಾರೆ. ವಿವಾಹ ರದ್ದುಮಾಡದಿದ್ದರೆ, ಕೆಳಗೆ ಇಳಿಯುವುದಿಲ್ಲವೆಂದು ಪಟ್ಟು ಹಿಡಿದಿದ್ದರು” ಎಂದು ಚೇಬ್ರೋಲು ಎಸ್ಐ ಮಣಿಕುಮಾರ್ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು, ಅಂಗನವಾಡಿ ಶಿಕ್ಷಕಿ ಹಾಗೂ ಮಹಿಳಾ ಕಲ್ಯಾಣ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ತಾಯಿ ಮತ್ತು ಅಪ್ರಾಪ್ತ ಬಾಲಕಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ವಿವಾಹ ರದ್ದಾದ ಬಳಿಕ, ಆತ ಟವರ್ನಿಂದ ಕೆಳಗೆ ಇಳಿದಿದ್ದಾರೆ.
ಏಲೂರು ಜಿಲ್ಲಾ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಯೋಜನಾಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, “ಕಳೆದ ಒಂದು ವಾರದಲ್ಲಿ ಪೆದವೇಗಿ ಮಂಡಲದ ವೇಗಿವಾಡ ಮತ್ತು ಕೊಪ್ಪಕ ಗ್ರಾಮಗಳಲ್ಲಿ ಎರಡು ಬಾಲ್ಯ ವಿವಾಹಗಳನ್ನು ನಿಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.