- ಬಳ್ಳಾರಿ ಜಿಲ್ಲಾದ್ಯಂತ ನಕಲಿ ಪ್ರಾಡಕ್ಟ್ ಗಳ ಹಾವಳಿ ಹೆಚ್ಚಾಗಿದೆ
- ಗ್ರಾಹಕರು ಮೋಸ ಹೋಗುವುದು ತಪ್ಪಿಸುವಂತೆ ವಿತರಕರ ಸಂಘ ಒತ್ತಾಯ
ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಹಕರಿಗೆ ಕಲಬೆರಕೆ ಮತ್ತು ನಕಲಿ ಪ್ರಾಡಕ್ಟ್ ಗಳನ್ನು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಕಿಶೋರ್ ಬಾಬು ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಅವರು, “ಇತ್ತೀಚೆಗೆ ಬಳ್ಳಾರಿಯಲ್ಲಿ
ನಕಲಿ ಪ್ರಾಡಕ್ಟ್ ಮಾರಾಟ ಹಾವಳಿ ಹೆಚ್ಚಾಗಿದೆ, ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಕ್ಲಿನಿಕ್ ಪ್ಲಸ್ ಶಾಂಪೂ, ಮೈಸೂರು ಸ್ಯಾಂಡಲ್ ಸೇರಿದಂತೆ ಮುಂತಾದ ನಕಲಿ ಪ್ರಾಡಕ್ಟ್ ಗಳು ಮಾರಾಟ ದಂಧೆ ನಡೆಯುತ್ತಿದೆ. ರಾಜಲಕ್ಷ್ಮಿ ಅಂಗಡಿಯಲ್ಲಿ ನಕಲಿ ಪ್ಯಾರಾಚೂಟ್ ಎಣ್ಣೆ ಮಾರಾಟ ವೇಳೆ ಸಿಕ್ಕಿಬಿದ್ದ ಅಂಗಡಿಯ ಮಾಲೀಕ ದಿನೇಶ್ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ” ಎಂದು ತಿಳಿಸಿದರು.
“ಜಿಲ್ಲಾ ವಿತರಕರ ಸಂಘದ ಮುಖಂಡ ಮರೇಗೌಡ ನಕಲಿ ಪ್ರಾಡಕ್ಟ್ ಖರೀದಿಸಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಾರೆ.ಜಿ ಎಸ್ ಟಿ ತೆರಿಗೆ ಪಾವತಿ ಮಾಡುವುದಿಲ್ಲ. ಗ್ರಾಹಕರು ಕಡಿಮೆ ದರದಲ್ಲಿ ಸಿಗುವ ವಸ್ತುಗಳನ್ನು ಖರೀದಿಗೆ ಮುಂದಾಗುತ್ತಾರೆ.ಇದರಿಂದ ಗ್ರಾಹಕರು ಮೋಸ ಹೋಗುವುದು ಸಾಮಾನ್ಯವಾಗಿದೆ” ಆರೋಪಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಗಿರಿರಾಜ್ ವಿಕ್ರಂ ಸಿಂಹ, ಸಂತೋಷ, ಎರಿಸ್ವಾಮಿ ಸೋಮಶೇಖರ್ ಸೇರಿದಂತೆ ಇತರರು ಇದ್ದರು.