ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ದ್ವೇಷ ಹರಡುವುದರಲ್ಲೇ ಕುಖ್ಯಾತಿ ಪಡೆದಿರುವ ರಾಜಸ್ಥಾನದ ‘ಜೈಪುರ್ ಡೈಲಾಗ್ಸ್’ನ ನಿರ್ದೇಶಕನಿಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸೇರಿದಂತೆ ಧರ್ಮಾಧಾರಿತ ದ್ವೇಷ ಹರಡುವ ಕೆಲಸ ಮಾಡುತ್ತಿರುವ thejaipurdialogues.comನ ಪಾಲುದಾರ ಹಾಗೂ ನಿರ್ದೇಶಕನೂ ಆಗಿರುವ ಸುನಿಲ್ ಶರ್ಮಾಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಸುನಿಲ್ ಶರ್ಮಾ ಅವರು ಜೈಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.
Wow! So Congress has given a ticket to Sunil Sharma, Partner and Director of @JaipurDialogues.
Hello @kharge @RahulGandhi @priyankagandhi, This handle @JaipurDialogues is one of the most hateful X handles. Most content against religion and Congress. pic.twitter.com/1Nk04nFeF4
— Mohammed Zubair (@zoo_bear) March 23, 2024
ಈ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆದಿರುವ ಆಲ್ಟ್ ನ್ಯೂಸ್ ಸಹಸಂಸ್ಥಾಪಕ, ದ್ವೇಷ ಹರಡುವವರ ವಿರುದ್ಧ ನಿರಂತರ ಬೇಟೆಯಾಡುತ್ತಿರುವ ಮುಹಮ್ಮದ್ ಝುಬೈರ್, “ಜೈಪುರ್ ಡೈಲಾಗ್ಸ್ನ ಪಾಲುದಾರ ಹಾಗೂ ನಿರ್ದೇಶಕ ಸುನೀಲ್ ಶರ್ಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆಹಾ. ಇದು ಅದ್ಭುತವೇ ಸರಿ” ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಝುಬೈರ್ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ ರಾಜಸ್ಥಾನ್ ಚೌಕ್ ಎಂಬ ಡಿಜಿಟಲ್ ಮೀಡಿಯಾದ ವರದಿಗಾರರೊಬ್ಬರು ಸುನಿಲ್ ಶರ್ಮಾ ಅವರನ್ನು ಜೈಪುರ್ ಡೈಲಾಗ್ಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ, ಸುನಿಲ್ ಶರ್ಮಾ ಕ್ಯಾಮೆರಾದಿಂದ ತಪ್ಪಿಸಿಕೊಂಡು ಹೋಗುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
Is this some kind of a joke? @congress gives ticket to a man named Sunil Sharma who is an active director in Jaipur Dialogues ,an X Handle and a YouTube channel that spreads hate and does all propaganda work against Congress and @RahulGandhi… @priyankagandhi @kharge… https://t.co/rgOTrRyamp
— Sakshi Joshi (@sakshijoshii) March 23, 2024
ಅಲ್ಲದೇ, ಈ ಹಿಂದೆ ದೇಶದ ಖ್ಯಾತ ಪತ್ರಕರ್ತ ರವೀಶ್ ಕುಮಾರ್, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಜೈನ್ ಸೇರಿದಂತೆ ಹಲವರ ವಿರುದ್ಧ ಮಾಡಿರುವ ದ್ವೇಷದ ಪೋಸ್ಟ್ಗಳನ್ನು ಕೂಡ ಝುಬೈರ್ ಹಂಚಿಕೊಂಡಿದ್ದಾರೆ.
‘ಜೈಪುರ್ ಡೈಲಾಗ್ಸ್’ ಬಲಪಂಥೀಯ ವಿಚಾರಧಾರೆ, ದ್ವೇಷವನ್ನು ವೆಬ್ಸೈಟ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚುವಲ್ಲಿ ಕುಖ್ಯಾತಿ ಪಡೆದಿದೆ. ಇವರ ಯೂಟ್ಯೂಬ್ ಚಾನೆಲ್ ಸುಮಾರು 14 ಲಕ್ಷ Subcribers ಅನ್ನು ಕೂಡ ಹೊಂದಿದೆ. ಇದಕ್ಕೆ ಐವರು ನಿರ್ದೇಶಕರಿದ್ದು, ಅದರಲ್ಲಿ ಸುನಿಲ್ ಶರ್ಮಾ ಕೂಡ ಒಬ್ಬರು.
ರಾಜಸ್ಥಾನದಲ್ಲಿ ‘ಜೈಪುರ್ ಡೈಲಾಗ್ಸ್’ನಂತೆಯೇ ಕರ್ನಾಟಕದಲ್ಲಿಯೂ ಕೂಡ ಸಂವಾದ, ಟಿವಿ ವಿಕ್ರಮ ಹೆಸರಿನ ಯೂಟ್ಯೂಬ್ ಚಾನೆಲ್ ಇದೇ ರೀತಿ ದ್ವೇಷ ಹರಡವುದರಲ್ಲಿ ನಿರತವಾಗಿದೆ.