(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಡಾಕ್ಟರ್ ಎಚ್ ಎಸ್ ಅನುಪಮಾ… ವೈದ್ಯೆ, ಬರಹಗಾರ್ತಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಸೇರಿದಂತೆ ಹಲವು ಮಹಿಳಾ ಮತ್ತು ಜನಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತೆ. ಅರಸೀಕೆರೆ ಮತ್ತು ತೀರ್ಥಹಳ್ಳಿ ತಾಲೂಕುಗಳ ನಂಟು ಹೊಂದಿರುವ ಇವರು ನೆಲೆಸಿರೋದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಎಂಬ ಹಳ್ಳಿಯಲ್ಲಿ. ಇದುವರೆಗೂ 56 ಅಮೂಲ್ಯ ಪುಸ್ತಕಗಳನ್ನು ರಚಿಸಿದ್ದಾರೆ; ಅವುಗಳಲ್ಲೆಲ್ಲ ಚರಿತ್ರೆಯ ಬಹುಮುಖ್ಯ ವ್ಯಕ್ತಿಗಳ ಬದುಕು ಕೂಡ ಅನಾವರಣ ಆಗಿರೋದು ವಿಶೇಷ.
ಇವರು ಯುವಜನರಿಗಾಗಿ ಪ್ರತೀ ತಿಂಗಳು ತಮ್ಮ ಮನೆಯಲ್ಲಿಯೇ ನಡೆಸಿಕೊಂಡು ಬರುತ್ತಿರುವ ‘ಪ್ರಜ್ಞಾ ಜಾಗೃತಿ ಶಿಬಿರ’ ನಾನಾ ಕಾರಣಕ್ಕೆ ಗಮನಾರ್ಹ. ಈ ಆಡಿಯೊ ಸಂದರ್ಶನದಲ್ಲಿ ಅನುಪಮಾ ಅವರು, ಚೆಗವಾರನ ಬದುಕು, ವೈದ್ಯವೃತ್ತಿಯ ಜೊತೆಗೆ ಬರಹಕ್ಕೆ ಮನಸ್ಸು ಮಾಡಿದ ಸಂದರ್ಭ, ತಾವು ಓದಿದ ಬಳ್ಳಾರಿಯ ವೈದ್ಯಕೀಯ ಕಾಲೇಜಿನ ನೆನಪು, ಬಾಲ್ಯದಲ್ಲಿ ಕಂಡು-ಕೇಳಿದ ತೀರ್ಥಹಳ್ಳಿ, ತಮ್ಮ ಪುಸ್ತಕಗಳ ವಿಶೇಷ, ಅಮ್ಮ ಹೇಳಿದ ಕತೆಗಳು, ತಾವು ನಡೆಸುತ್ತಿದ್ದ ಹೆರಿಗೆ ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆ, ‘ಪ್ರಜ್ಞಾ ಜಾಗೃತಿ ಶಿಬಿರ’ದಲ್ಲಿನ ಒಂದು ಸ್ಫೂರ್ತಿದಾಯಕ ಪ್ರಸಂಗ, ತಮ್ಮೂರಿನ ವ್ಯಕ್ತಿತ್ವ, ತಮ್ಮ ಬದುಕಿನ ಅತ್ಯಂತ ದುಃಖದ ಮತ್ತು ಅತ್ಯಂತ ನೆಮ್ಮದಿಯ ಘಟನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ