ಸುರಪುರ ನಗರದಲ್ಲಿರುವ ಖಾಸಗಿ ವೈದ್ಯಕೀಯ ಪ್ರಯೋಗಾಲಯ ಮತ್ತು ಖಾಸಗಿ ಕ್ಲಿನಿಕ್ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ನೇತೃತ್ವದ ತಂಡ ದಾಳಿ ನಡೆಸಿ ಪರವಾನಿಗೆ ತಪಾಸಣೆ ನಡೆಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ ಮಾತನಾಡಿ, “ಕೆಂಭಾವಿ ರಸ್ತೆಯಲ್ಲಿನ ಪಾಟೀಲ್ ಡೈಗ್ನೋಸ್ಟಿಕ್ ಕೇಂದ್ರಗಳ ಮೇಲೆ ದಾಳಿ ನಡೆಸಿ ಕೆಪಿಎಮ್ಇ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳದೇ ಇರುವುದನ್ನು ಪರಿಶೀಲಿಸಿ ಸೀಜ್ ಮಾಡಲಾಗಿದೆ” ಎಂದು ತಿಳಿಸಿದರು.
“ಡಾ.ವಿ.ಎಲ್.ಚೌದರಿ ಅವರು ಕೆಪಿಎಮ್ಇ ಕಾಯ್ದೆ ಅಡಿ ಪರವಾನಿಗೆ ನವಿಕರಣಗೊಳಿಸಿರದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ತಿಮ್ಮಾಪುರದ ಒಂದು ಖಾಸಗಿ ಕ್ಲಿನಿಕ್ಗೂ ಪರವಾನಿಗೆ ಪಡೆಯಲು ಒಂದು ವಾರಗಳ ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಸಿ ದೇಶಭಕ್ತಿಯ ಆಕ್ರೋಶದಲ್ಲಿ ಸುಟ್ಟು ಹೋಗದಿರಲಿ ‘ಅತಿಕ್ರಮಣದ’ ಸಂದೇಶ
ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ಅರ್ಹತೆ ಹೊಂದಿರುವ ವೈದ್ಯರು ನಡೆಸುವ ಖಾಸಗಿ ಕ್ಲೀನಿಕ್ಗಳಿಗೆ ಕಡ್ಡಾಯವಾಗಿ ಪಲೊಷನ್ ಬೋರ್ಡ್ ಲೈಸೆನ್ಸ್, ಮ್ಯಾನೆಜ್ಮೆಂಟ್ ಲೈಸೆನ್ಸ್ ಹಾಗೂ ಕೆಪಿಎಮ್ಇ ನೋಂದಣಿ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.