ಜಾರ್ಖಂಡ್ನಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಶ್ವಾನಗಳು ಸೇವಿಸದ ಬಿಸ್ಕೆಟ್ಅನ್ನು ಕಾರ್ಯಕರ್ತರಿಗೆ ನೀಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಗೆ ಶ್ವಾನಗಳ ಬಗ್ಗೆ ಇಷ್ಟೇಕೆ ವ್ಯಾಮೋಹ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾನು ಶ್ವಾನ ಹಾಗೂ ಅದರ ಮಾಲೀಕನನ್ನು ಕರೆದೆ. ಆ ಸಂದರ್ಭದಲ್ಲೇ ಶ್ವಾನ ನಿತ್ರಾಣಗೊಂಡು ನಡುಗುತ್ತಿತ್ತು. ನಾನು ಅದಕ್ಕೆ ಆಹಾರ ನೀಡಲು ಪ್ರಯತ್ನಿಸಿದೆ. ಆದರೆ ಅದು ತಿನ್ನದೆ ಭಯಗೊಂಡಿತ್ತು. ನಂತರ ನಾನು ಬಿಸ್ಕೆಟ್ಗಳನ್ನು ಶ್ವಾನದ ಮಾಲೀಕನಿಗೆ ನೀಡಿದೆ. ಅನಂತರದಲ್ಲಿ ಮಾಲೀಕನ ಕೈಯಿಂದ ಶ್ವಾನ ಬಿಸ್ಕೆಟ್ಅನ್ನು ಸೇವಿಸಿತು. ಇದೇಕೆ ವಿವಾದವಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಹೇಳಿದರು.
#WATCH | On the viral video of him feeding a dog during the ‘Bharat Jodo Nyay Yatra’, Congress leader Rahul Gandhi says, “…I called the dog and the owner. The dog was nervous, shivering and when I tried to feed it, the dog got scared. So I gave biscuits to the dog’s owner and… pic.twitter.com/QhO6QvfyNB
— ANI (@ANI) February 6, 2024
ಈ ವಿಷಯವನ್ನು ವಿವಾದ ಉಂಟು ಮಾಡಿದ ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಕಾಂಗ್ರೆಸಿನ ಕಾರ್ಯಕರ್ತ ಅಲ್ಲಿ ಎಲ್ಲಿದ್ದರು? ಬಿಜೆಪಿಯವರ ಶ್ವಾನಗಳ ವ್ಯಾಮೋಹದ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಬಿಜೆಪಿಗೆ ಶ್ವಾನಗಳಿಂದ ಏನು ಸಮಸ್ಯೆಯುಂಟಾಗಿದೆ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
ಶ್ವಾನಗಳು ತಿನ್ನದ ಬಿಸ್ಕೆಟ್ ಅನ್ನು ರಾಹುಲ್ ಗಾಂಧಿ ಕಾರ್ಯಕರ್ತರಿಗೆ ತಿನ್ನಿಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದರು. ಸ್ವತಃ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ರಾಹುಲ್ ಗಾಂಧಿ ಹಾಗೂ ಅವರ ಕುಟುಂಬ ನನ್ನನ್ನು ಬಿಸ್ಕೆಟ್ ತಿನ್ನುವಂತೆ ಮಾಡಲು ಆಗಲಿಲ್ಲ. ನಾನು ಬಿಸ್ಕೆಟ್ ತಿನ್ನುವುದನ್ನು ತಿರಸ್ಕರಿಸಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದೆ” ಎಂದಿದ್ದರು.
अभी कुछ दिन पहले कांग्रेस अध्यक्ष खड़गे जी ने पार्टी के बूथ एजेंटों की तुलना कुत्तों से की और यहाँ राहुल गांधी अपनी यात्रा में एक कुत्ते को बिस्किट खिला रहे हैं और जब कुत्ते ने नहीं खाया तो वही बिस्किट उन्होंने अपने कार्यकर्ता को दे दिया।
जिस पार्टी का अध्यक्ष और युवराज अपने… pic.twitter.com/70Mn2TEHrx
— Amit Malviya (@amitmalviya) February 5, 2024
ಬಿಜೆಪಿ ಸೇರ್ಪಡೆಗೂ ಮುನ್ನ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ 1990ರ ದಶಕದಿಂದ 2015ರವರೆಗೆ ಕಾಂಗ್ರೆಸ್ನಲ್ಲಿ ಇದ್ದರು. 2015ರಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.