ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೋಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಬೇಕು. ಆರೋಗ್ಯ ಚೆನ್ನಾಗಿರಲು ಪರಿಸರ ಅತಿ ಮುಖ್ಯ ಎಂದು ಡಾ. ಏನ್.ಬಿ ನಾಲತವಾಡ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಶಿಬಾರಗಟ್ಟಿ ಗ್ರಾಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಮರಾಠ ವಿದ್ಯಾ ಪ್ರಸಾರಕ ಮಂಡಳ, ಛತ್ರಪತಿ ಶಿವಾಜಿ ಮಹಾರಾಜ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಧಾರವಾಡ ಜಿಲ್ಲಾ ಪಂಚಾಯತಿ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕು. ಮರ-ಗಿಡಗಳು ಚೆಚ್ಚಾದರೆ, ಮಳೆ ಆಗುತ್ತದೆ. ಮಳೆಯಿಂದ ಬೆಳೆ ಬರುತ್ತದೆ. ಬೆಳೆ ಬಂದಾಗ ನಾವೆಲ್ಲರೂ ಬದುಕಲು ಸಾಧ್ಯವಾಗುತ್ತದೆ. ಎಲ್ಲ ವಿದ್ಯಾರ್ಥಿಗಳು ಸೇವೆ ಮಾಡುವುದರ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಜಾಗೃತರಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾರಾಯಣ ಪೋಮೋಜಿ, ಉಮೇಶ್ ಮಾಲನವರ್, ರಾಜು ಹೊಸಟ್ಟಿ, ನವಸಾರ್ ಮುಲ್ಲಾನವರ್, ಇಸ್ಮಾಯಿಲ್ ನದಾಫ್, ನಿಂಗಪ್ಪ ಗೋವನಕೊಪ್ಪ, ಮಡಿವಾಳಪ್ಪ ಗೋವನಕೊಪ್ಪ, ಶಿವಪ್ಪ ಪೋಮೋಜಿ, ಎಂಎಸ್ ಗಾಣಿಗೇರ್, ಪ್ರವೀಣ್ ಉಳ್ಳಿಗೇರಿ, ಎಸ್.ಯು ನವಲೆ ಹಾಗೂ ಹಲವಾರು ವಿದ್ಯಾರ್ಥಿಗಳು ಇದ್ದರು.