ಕಂಟ್ರಿಮೇಡ್ ಪಿಸ್ತೂಲ್ಗಳನ್ನು ಫೇಸ್ಬುಕ್ ಪುಟದಲ್ಲಿ ಚಿತ್ರಸಹಿತ ಜಾಹಿರಾತು ನೀಡಿದ್ದ ಆರೋಪಕ್ಕಾಗಿ ಮಧ್ಯಪ್ರದೇಶದ ಉಜ್ಜೈನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಾಹಿರಾತಿನಲ್ಲಿ ಪಿಸ್ತೂಲ್ಗಳನ್ನು ಹೋಮ್ ಡೆಲಿವರಿ ಮಾಡುವುದಾಗಿ ಭರವಸೆ ನಿಡಲಾಗಿತ್ತು. ಏಪ್ರಿಲ್ 23, 2023ರ ಕೊಹಿನೂರ್ ಗ್ರೂಪ್ ಉಜ್ಜೈನ್ ಎಂಬ ಹೆಸರಿನ ಫೇಸ್ಬುಕ್ ಪುಟದಲ್ಲಿ ಶಸ್ತ್ರಗಳ ಚಿತ್ರಗಳನ್ನು ಕೂಡ ಪ್ರಕಟಿಸಲಾಗಿತ್ತು.
ಆರೋಪಿಗಳು ಶಸ್ತ್ರಾಸ್ತ್ರ ಮಾರಾಟ ಮಾಡುವ ವ್ಯಕ್ತಿಯನ್ನು ‘ಪ್ಯೂರ್ ಬದ್ಮಾಶ್, ಮೈನ್ಲಿ ಕ್ರಿಮಿನಲ್ 302’ ಎಂಬ ಅಡಿಬರಹ ನೀಡಿದ್ದಾರೆ. ಪಿಸ್ತೂಲ್ ಹಾಗೂ ಗುಂಡುಗಳನ್ನು ಹೊಂದಿರುವ ವ್ಯಕ್ತಿಯ ಚಿತ್ರವನ್ನು ಜಾಹಿರಾತಿನಲ್ಲಿ ಪ್ರಕಟಿಸಲಾಗಿತ್ತು.
“ಪೋಸ್ಟ್ಅನ್ನು ಉಜ್ಜೈನ್ನ ಹೊರ ವಲಯದಲ್ಲಿ ಪೋಸ್ಟ್ ಮಾಡಲಾಗಿದೆ. ಆರೋಪಿಗಳನ್ನು ಸೈಬರ್ ಪೊಲೀಸರು ಪತ್ತೆ ಹಚ್ಚುವಲ್ಲಿ ಕಾರ್ಯನಿರತರಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ. ಫೇಸ್ಬುಕ್ ಪುಟದಲ್ಲಿ ಆರೋಪಿಯ ಚಿತ್ರವು ಸ್ಪಷ್ಟವಾಗಿಲ್ಲ. ಮೊಬೈಲ್ ನಂಬರ್ ಹಾಗೂ ಮಾರಾಟ ಮಾಡುವ ಸ್ಥಳಗಳನ್ನು ನೀಡಲಾಗಿರಲಿಲ್ಲ” ಎಂದು ಹೆಚ್ಚುವರಿ ಎಸ್ಪಿ ಜಯಂತ್ ರಾಥೋರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
ಉಜ್ಜೈನ್ ಪೊಲೀಸರು ಈ ಮೊದಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದುರ್ಲಬ್ ಕಶ್ಯಪ್ ಎಂಬಾತ ಗನ್ ಮತ್ತು ಇತರ ಶಸ್ತ್ರಾಶ್ತ್ರಗಳೊಂದಿಗೆ ಗ್ಯಾಂಗ್ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಜಾಹಿರಾತು ನೀಡಿದ್ದ. ನಂತರ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು. 2020ರ ಸೆಪ್ಟೆಂಬರ್ನಲ್ಲಿ ನಡೆದ ಗ್ಯಾಂಗ್ವಾರ್ನಲ್ಲಿ ದುರ್ಲಬ್ ಕಶ್ಯಪ್ ಹತನಾಗಿದ್ದ.
ಭಾರತೀಯ ಕಾನೂನು ‘ನೀಡಬಹುದಾದ’ ಆಧಾರದ ಮೇಲೆ ಪರವಾನಗಿಯೊಂದಿಗೆ ಬಂದೂಕು ಹೊಂದುವುದನ್ನು ಅನುಮತಿಸುತ್ತದೆ. ಕೇಂದ್ರ ಗೃಹ ಇಲಾಖೆಯು 2016ರಲ್ಲಿ ಬಿಡುಗಡೆಗೊಂಡ ಶಸ್ತ್ರಾಸ್ತ್ರಗಳ ನಿಯಮಗಳನ್ನು ಪ್ರಕಟಿಸಿದ ನಂತರ ಎಲ್ಲ ರೀತಿಯ ಬಂದೂಕು ಹೊಂದಿರುವ ಬಗ್ಗೆ ರಾಜ್ಯ ಸರ್ಕಾರಗಳು ಅವಲೋಕನ ವಹಿಸುವಂತೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ನಿಯಮದ ಅನ್ವಯ ಪರವಾನಗಿಯೊಂದಿಗೆ ಬಂದೂಕು ಹೊಂದಿರುವವರು ತಮ್ಮ ಬಂದೂಕನ್ನು ಸಾರ್ವಜನಿಕ ಸ್ಥಳಗಳಿಗೆ ವಿನ್ಯಾಸಗೊಳಿಸಲಾದ ಹೊದಿಕೆ ಇಲ್ಲದೆ ತೆಗೆದುಕೊಂಡು ಹೋಗುವಂತಿಲ್ಲ.