ಬೀದರ ಜಿಲ್ಲಾ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾಗಿ ಡಾ. ಧ್ಯಾನೇಶ್ವರ ನೀರಗುಡೆ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. “ಆರೋಗ್ಯ ಇಲಖೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಜಿಲ್ಲೆಯ ಸಮಗ್ರ ಆರೋಗ್ಯ ಸೇವೆಗಳ ಅಭಿವೃದ್ಧಿಗೆ ಹಾಗೂ ಸುಗಮ ಆಡಳಿತಕ್ಕಾಗಿ ಇಲಾಖೆಯ ಎಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕಾರ ನೀಡಬೇಕು” ಎಂದು ಕೋರಿದರು.
ಈ ಹಿಂದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಡಾ. ರತಿಕಾಂತ ಸ್ವಾಮಿ ಅವರನ್ನು ಔರಾದನ ತಾಲೂಕಿನ ಸಂತಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಮಕ್ಕಳ ತಜ್ಞರ ಹುದ್ದೆಗೆ ವರ್ಗಾಯಿಸಲಾಗಿದೆ. ಸದರಿ ಹುದ್ದೆಗೆ ಭಾಲ್ಕಿ ತಾಲೂಕು ಆರೋಗ್ಯಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಧ್ಯಾನೇಶ್ವರ ನೀರಗುಡೆ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನೇಮಿಸಿ ವರ್ಗಾಯಿಸಲಾಗಿದೆ.
ಕಾರ್ಯಕ್ರಮದಲ್ಲಿ ಅನುಷ್ಠಾನಾಧಿಕಾರಿಗಳಾದ ಡಾ: ರಾಜಶೇಖರ ಪಾಟೀಲ , ಡಾ: ಕಿರಣ ಪಾಟೀಲ, ಡಾ: ಶರಣಯ್ಯಾ ಸ್ವಾಮಿ, ಡಾ: ಶೆಂಕ್ರೆಪ್ಪಾ ಬೊಮ್ಮಾ , ಡಾ:ದಿಲೀಪ ಡೊಂಗ್ರೆ, ಡಾ:ವಿ.ಜಿ. ರೆಡ್ಡಿ , ಡಾ: ನಿತೀನ ಬಿರಾದಾರ, ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ: ಶಿವಕುಮಾರ ಸಿದ್ದೇಶ್ವರ, ಡಾ: ಸಂಗಾರೆಡ್ಡಿ , ಡಾ:ಅಶೋಕ ಮೈಲಾರೆ, ಡಾ: ಗಾಯತ್ರಿ, ಮತ್ತು ವೈದ್ಯಾಧಿಕಾರಿಗಳು ಡಾ: ಅನೀಲ ರಾಯಪಳ್ಳಿ , ಡಾ: ರವಿ ಕಲಶೆಟ್ಟಿ,
ಡಾ: ಶರಣಪ್ಪದ ಮುಡುಬಿ, ಡಾ:ಭಗವಾನ, ಡಾ:ಗುರುರಾಜ ಗೌರಿ, ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಾದ ರಾಜುಕುಮಾರ ಬಿ. , ಎಂ.ಎ. ಸತ್ತಾರ, ಮೌನದಾಸ, ಪ್ರಶಾಂತ, ಕಾಶಿನಾತ ಡ್ಯಾಮ, ಉಮೇಶ ಬಿರಾದಾರ, ಜಾವೇದ್ ಕಲ್ಯಾಣಕರ , ಮಲ್ಲಿಕಾರ್ಜುನ ಗುಡ್ಡೆ, ವೀರಶೆಟ್ಟಿ, ಚನ್ನಶೆಟ್ಟಿ, ಶ್ಯಾಮರಾವ ಉಮೇಶ ಪ್ರದಸ, ಶಿವರಾಜ ತಡೋಳ್ಗೆ, ವಿಶಾಲ, ಕಿಶನ ರಾಠೋಡ್, ದೇವಿದಾಸ, ಸೂರ್ಯಕಾಂತ, ನಂದಕುಮಾರ, ಪವನಕುಮಾರ, ಲಾಲಯ್ಯಾ ಉಪಸ್ಥಿರಿದ್ದರು.