ಹಿಜಾಬ್ ವಿಷಯ ಹಠಾತ್ ಆಗಿ ಮುನ್ನೆಲೆಗೆ ಬಂದಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೊಡ್ಡ ಕುತಂತ್ರ ಅಡಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಗ್ಯಾರಂಟಿಗಳಿಂದ ಬರಿದಾದ ಖಜಾನೆ, ಅನುದಾನಕ್ಕಾಗಿ ಶಾಸಕರ ಒತ್ತಡ, ನಿಗಮ ಮಂಡಳಿ ನೇಮಕಕ್ಕೆ ಸೊಪ್ಪು ಹಾಕದ ಹೈಕಮಾಂಡ್ ಇವೆಲ್ಲದರಿಂದ ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದಾಮಯ್ಯನವರು ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ವಿರೋಧ ವ್ಯಕ್ತಪಡಿಸಿ, “ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಜಾತ್ಯತೀತ ಸ್ವರೂಪವನ್ನು ಪ್ರಶ್ನಿಸುವಂತಿದೆ” ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
ಸಿದ್ದರಾಮಯ್ಯ ಹೇಳಿದ್ದೇನು?
‘ಹಿಜಾಬ್ ನಿಷೇಧ ವಾಪಸ್ ಪಡೆಯಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಮೈಸೂರಿನ ಕಲವಂದೆಯಲ್ಲಿ ಮಾತನಾಡಿದ್ದ ಅವರು, ”ಉಡುಪು, ಆಹಾರ ಪದ್ಧತಿ… ಅವು ನಿಮ್ಮ ಆಯ್ಕೆ. ನಾನೇಕೆ ಇವುಗಳಿಗೆ ಅಡ್ಡಿಯಾಗಲಿ? ನೀವು ಬಯಸಿದ ಉಡುಪನ್ನು ಧರಿಸಿ, ನಿಮಗೆ ಬೇಕಾದದ್ದನ್ನು ತಿನ್ನಿ. ನನಗೆ ಬೇಕೆನಿಸಿದ್ದನ್ನು ನಾನು ತಿನ್ನುವೆ. ಉಡುಪು, ಆಹಾರ ಅವರವರ ಇಷ್ಟ ಮತ್ತು ಹಕ್ಕು. ಇದು ತುಂಬಾ ಸರಳ, ಓಟಿಗಾಗಿ ರಾಜಕಾರಣ ಮಾಡಬಾರದು. ನಾವು ಅಂತಹ ರಾಜಕಾರಣ ಮಾಡುವುದಿಲ್ಲ” ಎಂದಿದ್ದರು.
ವಿರೋಧ ಪಕ್ಷದ ನಾಯಕರೆ,,, ಹಿಜಾಬ್ ನಿಷೇಧ ಮಾಡಲು ಯಾರಾದ್ರೂ ಮುಸ್ಲಿಂ ಧರ್ಮಗುರುಗಳು ಕೇಳಿದ್ರಾ,,ಈ ದೇಶದಲ್ಲಿ ಸಾವಿರಾರು ಸಮುದಾಯಗಳು ಅವರದೇ ಆದ ಊಟಾ ಉಡುಗೆ ತೊಡುಗೆ ಸಂಪ್ರದಾಯಗಳಿವೆ,, ಉದಾಹರಣೆಗೆ ಸಿಖ್ ಸಮುದಾಯದ ಮಕ್ಕಳು ಎಲ್ಲಿಗೆ ಹೋದರೂ ತಮ್ಮದೇ ಆದ ಕೇಶ ಸಂಸ್ಕಾರ ಇದೆ,, ಜೈನ್, ಬನಿಯಾ ಸಮುದಾಯದ ಮಹಿಳೆಯರು ಮುಖ ಮುಚ್ಚಿಕೊಂಡೆ ಹೊರಗೆ ಓಡಾಡುವರು,,, ಕೆಲವು ಮಕ್ಕಳು ಶಾಲೆಗೆ ಉದ್ದನೆ ನಾಮಾ ಬಳ್ಕೊಂಡು ಬರುವರು,, ಅವರಿಗೆ ನೀವು ಇತರೆ ಮಕ್ಕಳಂತೆ ಹಾಗೆ ಬರಲು ಒತ್ತಾಯ ಮಾಡುವಿರಾ,,, ನಿಮ್ಮ ಸರಕಾರ ನಿಷೇಧ ಮಾಡಲು ಹಿಂದಿನ ಪ್ರೇರಣೆ ಮನುವ್ಯಾಧಿಗಳ ಅಲ್ವಾ,,, ನಿಮ್ಮ ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಸೌಹಾರ್ದವನ್ನು ಹಾಳುಗೆಡವಿ ಸರ್ವಾಧಿಕಾರಿ ಧೋರಣೆ ತೋರಿಸುವ ಎಷ್ಟೊಂದು ಉದಾಹರಣೆಗಳಿವೆ ತಿರುಗಿ ನೋಡಿಕೊಳ್ಳಬೇಕು,,, ನಿಮ್ಮನ್ನೇ ನೀವು ತಿದ್ದಿಕೊಳ್ಳಲು ಆಗದವರು ಸರಕಾರದ ತಪ್ಪುಗಳನ್ನು ಸಲಹೆ ಕೊಡಲು ಹೇಗೆ ಸಾಧ್ಯ ನಿಮಗೆ,,,, ನೀವು ಸ್ವತಂತ್ರವಾಗಿ ವಿರೋಧ ಪಕ್ಷದ ನಾಯಕನ ಪಾತ್ರ ನಿರ್ವಹಿಸಲು ನಿಮಗೆ ನಿಜವಾಗಿಯೂ ಸಾಧ್ಯವಿದೆಯೇ,,, ನಿಮ್ಮನ್ನು ನೀವೇ ಕೇಳಿಕೊಂಡರೆ ಬಹುಶಃ ಜ್ಞಾನೋದಯ ಆಗಬಹುದು