- ವಿರೋಧ ಮಾಡಿದ ನಿರಾಣಿ ಸಮ್ಮುಖದಲ್ಲೇ ಬಿಜೆಪಿ ಸೇರ್ಪಡೆ
- ಭೂಸ್ವಾಧೀನ ರೈತ ಹೋರಾಟದ ನೇತೃತ್ವ ವಹಿಸಿದ್ದ ಪ್ರಕಾಶ
ಸಂಪದ್ಭರಿತ ಕೃಷಿ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಭೂಸ್ವಾಧಿನ ಮಾಡಿಕೊಳ್ಳಲು ಹೊರಟ್ಟಿದ್ದ ಸರ್ಕಾರದ ವಿರುದ್ಧ ಹಾಗೂ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ರೈತ ಮುಖಂಡ ಪ್ರಕಾಶ ನಾಯಕ ಅವರು ಈಗ ನಿರಾಣಿ ಸಮ್ಮುಖದಲ್ಲಿಯೇ ಬಿಜೆಪಿ ಸೇರಿ ಅಚ್ಚರಿ ಮೂಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಸರ್ಕಾರವು ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದೆ ಬಂದಾಗ ಇದನ್ನು ವಿರೋಧಿಸಿದ್ದ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಹೋರಾಟದ ಮುಂಚೂಣಿಯಲ್ಲಿದ್ದ ರೈತ ಮುಖಂಡ ಪ್ರಕಾಶ ನಾಯಕ ಇಷ್ಟಕ್ಕೆ ಸುಮ್ಮನಾಗದೇ ಸಾವಿರಾರು ರೈತರ ಸಮ್ಮುಖದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ, ಕೈಗಾರಿಕಾ ಸಚಿವ ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ವಿರುದ್ದ ಹರಿಹಾಯ್ದಿದ್ದರು.
ಈ ಸುದ್ದಿ ಓದಿದ್ದೀರಾ? : ಬಿಜೆಪಿ ಖಜಾನೆ ತುಂಬಿದ್ದು, ದುಡ್ಡು ಕೊಟ್ಟು ಜನರನ್ನು ಕರೆತರುತ್ತದೆ: ಮಲ್ಲಿಕಾರ್ಜುನ ಖರ್ಗೆ
ಇದೇ ವಿಷಯವಾಗಿ ಇಬ್ಬರು ನಾಯಕರು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೆಸರು ಎರಚಿಕೊಂಡಿದ್ದರು. ಇದೀಗ ಇದೇ ನಿರಾಣಿ ಸಮ್ಮುಖದಲ್ಲಿಯೇ ಪ್ರಕಾಶ ಬಿಜೆಪಿ ಸೇರಿದ್ದು ಜಿಲ್ಲೆಯಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಕಾಶ ನಾಯಕ, “ಎರಡು ಸಾವಿರಕ್ಕೂ ಹೆಚ್ಚಿನ ರೈತರ ಭೂಮಿಯನ್ನು ಭೂಸ್ವಾಧಿನ ಮಾಡಿಕೊಳ್ಳುವುದಾಗಿ ಹೇಳಿದ್ದ ಮುರಗೇಶಿ ನಿರಾಣಿ ಹಲಕುರ್ಕಿ ಗ್ರಾಮದಲ್ಲಿರುವ ಯಾವ ರೈತರ ಜಮೀನುಗಳನ್ನು ಭೂ ಸ್ವಾಧಿನಪಡಿಸಿಕೊಳ್ಳುವುದಿಲ್ಲ ಎಂದು ಮಾತುಕೊಟ್ಟಿದ್ದಾರೆ” ಎಂದು ತಿಳಿಸಿದರು.
“ಭೂಸ್ವಾಧಿನ ಮಾಡಿಕೊಳ್ಳುವುದರ ವಿರುದ್ಧ ನಾನು ನಡೆಸಿದ ಹೋರಾಟದಲ್ಲಿ ಬೀಳಗಿ ಕ್ಷೇತ್ರದ ಯಾವೊಬ್ಬ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳದೇ ಇದ್ದದ್ದರಿಂದ ಅಸಮಧಾನಿತನಾಗಿ ಮುರುಗೇಶ ನಿರಾಣಿ ನೇತೃತ್ವದಲ್ಲಿ ಬಿಜೆಪಿ ಸೇರುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.