ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರ ಹೆರಿಗೆ ಭತ್ಯೆಯನ್ನು ತಡೆಹಿಡಿದ್ದ ಕೆಪಿಟಿಸಿಎಲ್ ವಿರುದ್ಧ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆಕೆಯ ಹೆರಿಗೆ ಭತ್ಯೆಯನ್ನು ವಿತರಿಸುವಂತೆ ನಿಗಮಕ್ಕೆ ಆದೇಶ ಮಾಡಿದೆ.
ಕೆಪಿಟಿಸಿಎಲ್ನಲ್ಲಿ ಹಿರಿಯ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದ ಎ.ಆಲಿಸ್ ಎಂಬವರು 2013ರಲ್ಲಿ ನಿವೃತ್ತಿರಾಗಿದ್ದರು. ಅವರು ಸೇವೆ ಸಲ್ಲಿಸುವ ಸಮಯಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ಆಗ, ಆಕೆಯ ಹೆರಿಗೆ ಭತ್ಯೆಯನ್ನು ತಡೆಹಿಡಿಯಲಾಗಿತ್ತು. ಕೆಪಿಟಿಸಿಎಲ್ ಕಾನೂನುಬಾಹಿರವಾಗಿ ತಮಗೆ ಸಲ್ಲಬೇಕಿದ್ದ ಭತ್ಯೆಯನ್ನು ತಡೆಹಿಡಿದೆ ಎಂದು ಆರೋಪಿಸಿ 71 ವರ್ಷದ ಆಲಿಸ್ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದಿರಾ?: ಸಂದೇಶ್ಖಾಲಿ ಪ್ರಕರಣ | ಟಿಎಂಸಿ ವಿರುದ್ಧ ಮತ ಚಲಾಯಿಸಿದ್ದಕ್ಕೆ ಆದಿವಾಸಿಗಳಿಗೆ ಚಿತ್ರಹಿಂಸೆ; ಎನ್ಸಿಎಸ್ಟಿ ವಿವರ
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಪೀಠ, ಕೆಪಿಟಿಸಿಎಲ್ ವಿರುದ್ಧ ಅಸಮಾಧಾನ ವ್ಯಕ್ತೊಡಿಸಿದೆ. ಮಹಿಳೆಯ 90 ದಿನಗಳ ಹೆರಿಗೆ ಭತ್ಯೆಯನ್ನು 2013ರ ಮೇ 1ರಿಂದ ಇಲ್ಲಿಯವರೆಗೆ ಶೇ.8ರಷ್ಟು ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶಿಸಿದೆ.