ಕನ್ನಡದಲ್ಲಿ ಬರೆದ ಕಾರಣಕ್ಕೆ ಕುವೆಂಪುಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ: ಎಲ್ ಹನುಮಂತಯ್ಯ

Date:

ಕುವೆಂಪು ಈ ದೇಶದ ಮಹಾನ್ ಜ್ಞಾನಿ. ಕುವೆಂಪು ಅವರ ಒಂದೊಂದು ಸಾಲುಗಳು ಮಹಾಕಾವ್ಯಗಳಾಗಿದ್ದವು. ಕುವೆಂಪು ಅವರು ಕನ್ನಡದಲ್ಲಿ ಬರೆದ ಕಾರಣಕ್ಕಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆ ಕುವೆಂಪು ಅವರಲ್ಲಿತ್ತು ಎಂದು ರಾಜ್ಯಸಭಾ ಸದಸ್ಯ, ಕವಿ ಡಾ. ಎಲ್ ಹನುಮಂತಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಜಾಣಜಾಣೆಯರ ವೇದಿಕೆ ಆಯೋಜಿಸಿದ್ದ ‘ವಿಶ್ವಮಾನವೋತ್ಸವ – ಕಾಂತ್ರಿ ಕವಿಗೆ 120’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕುವೆಂಪು ಅವರು ಯಾವ ವಿಚಾರಗಳನ್ನು ಎದುರುಗೊಂಡರು ಎಂಬುದನ್ನು ನಾವು ನೋಡಬೇಕು. ಲೇಖಕ ತಾನು ಬರೆಯುವಾಗ ಯಾವ ವಿಷಯಗಳು, ಸಮಸ್ಯೆಗಳನ್ನ ಎದುರುಗೊಳ್ಳುತ್ತಾರೆ ಎಂಬುದು ಮುಖ್ಯ. ಆ ರೀತಿಯಲ್ಲಿ ವಿಭಿನ್ನವಾಗಿ ಹಲವು ವಿಚಾರಗಳನ್ನು ಎದುರುಗೊಂಡವರು ಕುವೆಂಪು” ಎಂದು ಹೇಳಿದರು.

“ಕುವೆಂಪು ಅವರ ಭಾಷಣ ಕೇಳಲು ನೂರಾರು ಕಿ.ಮೀ.ಗಳಿಂದ ಜನರು ಬರುತ್ತಿದ್ದರು. ಕುವೆಂಪು ಅವರಿಗೆ ನಮ್ಮ ಮುಂದೆ ಕುಳಿತಿರುವ ಜನರಿಗೆ ಯಾವ ವಿಚಾರಗಳನ್ನು ತಿಳಿಸಬೇಕೆಂಬುದು ಗೊತ್ತಿತ್ತು. ನೂರು ದೇವತೆಯ ನೂಕಾಚೆ ದೂರ, ಭಾರತಾಂಬೆಯ ಪೂಜಿಸುವ ಬಾರ’ ಎಂದಿದ್ದ ಕುವೆಂಪು, ದೇಶಕಟ್ಟುವುದೇ ನಿಜವಾದ ಪೂಜೆ ಎಂದಿದ್ದರು. ನೂರಾರು ದೇವರುಗಳನ್ನು ನಿರಾಕರಣೆ ಮಾಡಿ ಎಂದು ಕುವೆಂಪು ಹೇಳಿದ್ದರು. ಅಂತಹ ಹೇಳಿಕೆ ಕೊಡಲು ಭಾರೀ ಧೈರ್ಯಬೇಕು. ಕುವೆಂಪು ಅವರು ಹುಸಿ ಆಧ್ಯಾತ್ಮವನ್ನು ಎಂದೂ ನಂಬಿರಲಿಲ್ಲ. ಅವರಿಗೆ ಅನುಭವ, ಪ್ರಾಮಾಣಿಕತೆ, ವಿಚಾರವಾದವೇ ಭಕ್ತಿಯಾಗಿತ್ತು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕುವೆಂಪು ಅವರು ಮಂತ್ರಮಾಂಗಲ್ಯವನ್ನು ಹುಟ್ಟು ಹಾಕಿದ್ದು, ಧರ್ಮ ನಿರಪೇಕ್ಷತೆಯಿಂದ. ಬಹುಸಂಖ್ಯಾತರು ಯಾವುದರಿಂದ ಬದುಕಲು ಸಾಧ್ಯ ಎಂದು ಕುವೆಂಪು ಚಿಂತಿಸುತ್ತಿದ್ದರು. ಎಲ್ಲರೂ ಸಮಸ್ಯದಿಂದ ಬದುಕುವ ಧರ್ಮ ಬೇಕು. ಹಿಂಸೆ ಹರಡುವ ದೇಶವಲ್ಲ ಎಂಬುದು ಅವರ ಚಿಂತನೆಯಾಗಿತ್ತು” ಎಂದು ತಿಳಿಸಿದರು.

“ಬುದ್ಧ ಕುವೆಂಪು ಅವರಷ್ಟು ಮಾತುಗಾರನಲ್ಲ. ದೇವರ ಬಗ್ಗೆ ಬುದ್ಧನನ್ನು ಕೇಳಿದಾಗ, ‘ನಾನು ನೋಡದವರ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದಿದ್ದರು. ಆದರೆ, ಕುವೆಂಪು, ‘ಆ ದೇವರನ್ನೆಲ್ಲ ತಿರಸ್ಕಾರ ಮಾಡಿ’ ಎಂದಿದ್ದರು.ಅಂಬೇಡ್ಕರ್ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿ, ಭಾರತದಂತಹ ದೇಶದಲ್ಲಿ ಧರ್ಮ ಅನಿವಾರ್ಯ ಎಂದಿದ್ದರು. ಮಾರ್ಕ್ಸ್‌ ‘ಧರ್ಮ ಅಫೀಮು’ ಎಂದಿದ್ದರು. ಅದರೆ, ಮಾರ್ಕ್ಸ್‌ ಅನುಯಾಯಿಗಳಾದ ಕಾರ್ಮಿಕರ ಮುಖಂಡರು ಮನೆಯಲ್ಲಿ ದೇವರನ್ನು ಪೂಜಿಸುತ್ತಿದ್ದರು. ಅವರಿಗೆ ಮಾರ್ಕ್‌ ಹೇಳಿದ ಮಾತು ಅರ್ಥವೇ ಆಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮನುಷ್ಯಕುಲದ ದೊಡ್ಡ ಸಮುದಾಯವನ್ನ ಶೂದ್ರರು ಎನ್ನುತ್ತೇವೆ. ಈ ಶೂದ್ರರಲ್ಲಿ ದಲಿತರಿಲ್ಲ. ದಲಿತರು ಪಂಚಮರಾಗಿದ್ದರು. ಭಾರತದಲ್ಲಿ 60% ಶೂದ್ರರಿದ್ದಾರೆ. ಅವರು ಅತ್ತ ವೃತ್ತಿಯೂ ಕಾಣದೆ, ಇತ್ತ ಪಂಚಮರೂ ಆಗಲಾರದೆ ತ್ರಿಶಂಕು ಸ್ಥಿತಿಯಲ್ಲಿದ್ದರು. ಕುವೆಂಪು ಅವರಿಗೆ ತಾವು ಮಾಡುವ ಪ್ರತಿ ಹೇಳಿಕೆಯ ಬಗ್ಗೆ ಅರಿವಿತ್ತು. ಅಂತಹ ಹೇಳಿಕೆ ನೀಡಲು ಅವರಿಗೆ ಎಂಟೆದೆ ಬೇಕಿತ್ತು. ಅಂತಹ ಮಾತುಗಳನ್ನು ಕುವೆಂಪು ಹೇಳಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಾತಿ ದೌರ್ಜನ್ಯ: ದಲಿತ ಯುವತಿ ವಿವಾಹವಾದ ಯುವಕನ ಕುಟುಂಬಕ್ಕೆ ಬಹಿಷ್ಕಾರ

“ಧರ್ಮವನ್ನ ರಕ್ಷಿಸಿದರೆ, ಧರ್ಮ ನಿಮ್ಮನ್ನು ರಕ್ಷಿಸುತ್ತದೆ ಎನ್ನುತ್ತಾರೆ. ದಲಿತರು ಸಾವಿರಾರು ವರ್ಷಗಳಿಂದ ಧರ್ಮ ಪಾಲನೆ ಮಾಡಿದ್ದಾರೆ. ಆದರೆ, ಧರ್ಮ ಯಾವಾಗ ದಲಿತರನ್ನು ರಕ್ಷಿಸಿದೆ. ಸಾವಿರಾರು ವರ್ಷಗಳಿಂದ ದಲಿತರು ಯಾರಿಗೂ ಅನ್ಯಾಯ ಮಾಡಿಲ್ಲ. ಪ್ರಬಲ ಜಾತಿಯವರ ಜೀತ ಮಾಡಿದ್ದಾರೆ. ಆದರೆ, ದಲಿತರಿಗೆ ಏನು ಸಿಕ್ಕದೆ” ಎಂದ ಹನುಮಂತಯ್ಯ ಹೇಳಿದರು.

“ಈ ದೇಶದ ದೊಡ್ಡ ಕಮ್ಯುನಿಸ್ಟ್‌ ನೆಹರು. ಅವರು ಒಂದು ಅಣೆಕಟ್ಟು ಉದ್ಘಾಟಿಸಿ, ನೂರು ದೇವಾಲಯಗಳನ್ನು ತೆರೆದಷ್ಟು ಸಂತೋಷವಾಯಿತು ಎಂದಿದ್ದರು. ಅವರು ತಮ್ಮ ಆನಂದ ಭವನವನ್ನೇ ದೇಶಕ್ಕಾಗಿ ಸರ್ಕಾರಕ್ಕೆ ಕೊಟ್ಟರು. ಅವರನ್ನೇ ಏನು ಮಾಡಿದ್ದಾರೆ ಅಂತ ಕೆಲವರು ಪ್ರಶ್ನಿಸುತ್ತಿದ್ದಾರೆ. ಆ ರೀತಿ ಪ್ರಶ್ನಿಸುತ್ತಿರುವವರು ಯಾರು? ದೇಶಕ್ಕಾಗಿ ಏನು ಮಾಡದವರು. ಯಾವ ತ್ಯಾಗವನ್ನೂ ಮಾಡದವರು” ಎಂದು ಕಿಡಿಕಾರಿದರು.

ಗೋಡೆ ಇದ್ದಲ್ಲಿ ದೇವರ ಫೋಟೋ ಸಂಸ್ಕೃತಿ: ಎಚ್‌.ಆರ್ ಸ್ವಾಮಿ

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಆರ್ ಸ್ವಾಮಿ, “ದಲಿತರು ಶೂದ್ರರು ಈಗ ಹೋಮ, ಹವನಗಳಲ್ಲಿ ಟ್ರ್ಯಾಪ್‌ಗೆ ಬಿದ್ದಿದ್ದಾರೆ. ಅವರಿಗಾಗಿ ನಾನಾ ರೀತಿಯ ಪೂಜೆಯ ಪ್ಯಾಕೇಜ್‌ಗಳನ್ನ ನೀಡಲಾಗುತ್ತಿದೆ. ಹಿಂದೆ ಇಂತಹ ಸಂಸ್ಕೃತಿ ಶೂದ್ರರಲ್ಲಿ ಇರಲಿಲ್ಲ. ದೇವರ ಫೋಟೋ ಬಗ್ಗೆ ಹೇಳಿದ್ದ ನಮ್ಮ ತಾತ ‘ನಮ್ಮನೆಗೆ ಗೋಡೆಯೇ ಇರಲಿಲ್ಲ. ಇನ್ನು ದೇವರ ಫೋಟೋ ಎಲ್ಲಿಂದ ತರೋದು’ ಅಂದಿದ್ದರು. ಗೋಡೆ ಇದ್ದಾಗ ಮಾತ್ರ ಫೋಟೋ ಸಂಸ್ಕೃತಿ ಬರುತ್ತದೆ” ಎಂದರು.

“ಕುವೆಂಪು ಅವರನ್ನು ನಾವು ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ಕಲಿಸಬೇಕು. ಆರ್‌ಎಸ್‌ಎಸ್‌ ಅವರು ಸಾವರ್ಕರ್‌ ಬಗ್ಗೆ ಚಿಕ್ಕಮಕ್ಕಳಲ್ಲೇ ತುಂಬಲು ಅರಂಭಿಸುತ್ತಾರೆ. ನಾವುಗಳು ಕುವೆಂಪು, ಪೆರಿಯಾರ್, ಅಂಬೇಡ್ಕರ್‌ ಅವರ ಬಗ್ಗೆ ಬಾಲ್ಯದಲ್ಲೇ ಮಕ್ಕಳಿಗೆ ತಿಳಿಸಬೇಕು” ಎಂದು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ | ಶೋಭಾ ಗೋಬ್ಯಾಕ್ ಅಭಿಯಾನ ರಾಜೀವ್ ಗೌಡರಿಗೆ ವರವಾಗಲಿದೆಯೆ?

ಹಲವು ರಾಜಕೀಯ ಇತಿಹಾಸ ಹೊಂದಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ...

ಕಲಬುರಗಿ | ʼನಮ್ಮ ಮತ, ನಮ್ಮ ಭವಿಷ್ಯ, ನಮ್ಮ ದೇಣಿಗೆ’ ಅಭಿಯಾನ

ʼನಮ್ಮ ಮತ, ನಮ್ಮ ಭವಿಷ್ಯ, ನಮ್ಮ ದೇಣಿಗೆ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ...

ದಕ್ಷಿಣ ಕನ್ನಡ | ಮೀನಿನ ಆಹಾರ ತಯಾರಿಕಾ ಘಟಕದಲ್ಲಿ ಬೆಂಕಿ; ಕೋಟ್ಯಂತರ ರೂ. ನಷ್ಟ

ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕೋಳಿ, ಮೀನಿನ ಆಹಾರ...

ವಿಜಯಪುರ | ಕೆಂಪು ಮೆಣಸಿಕಾಯಿಗೆ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ರೈತ ಸಂಘ ಆಗ್ರಹ

ಕೆಂಪು ಮೆಣಸಿಕಾಯಿಗೆ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಕರ್ನಾಟಕ ರಾಜ್ಯ ರೈತ...