ಪಿಯು ಮಂಡಳಿಯನ್ನು ರದ್ದುಪಡಿಸಿ ಅದರ ಎಲ್ಲ ಕಾರ್ಯಗಳನ್ನು ಜಿಲ್ಲಾಪಂಚಾಯತ್ಗೆ ವರ್ಗಾಯಿಸುವದನ್ನು ವಿರೋಧಿಸಿ ಪಟ್ಟಣದಲ್ಲಿ ಪಿಯು ಪ್ರಾಚಾರ್ಯರರು ಮತ್ತು ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ, ಮಿನಿ ವಿಧಾನಸೌಧದವರೆಗೆ ಸಾಗಿ ಪ್ರತಿಭಟಿಸಿದ್ದಾರೆ.
ಕಿರಣ ನಡಕಟ್ಟಿ, ಸದಾನಂದ ಈರನಕೇರಿ ಮಾತನಾಡಿ ಪಿಯು ಇಲಾಖೆ ಉಳಿಸಿ ಮತ್ತಷ್ಟು ಬಲಿಷ್ಟ ಗೊಳಿಸುವದು, ಪಿಯು ಪರೀಕ್ಷೆ ಹೊಣೆ ಪಿಯು ಬೋರ್ಡಗೆ ವಾಪಸ್ ನೀಡುವದು, ಪಿಯು ಇಲಾಖೆ ಜಿಲ್ಲಾ ಪಂಚಾಯತ್ಗೆ ನೀಡಬೇಡಿ. ಅವೈಜ್ಞಾನಿಕ ಮೂರು ವಾರ್ಷಿಕ ಪರೀಕ್ಷೆ ರದ್ದಾಗಲಿ, ಪಿಯು ಇಲಾಖೆ ಅಸ್ಮಿತೆಗೆ ಮತ್ತು ಅಸ್ತಿತ್ವಕ್ಕೆ ದಕ್ಕೆ ತರಬೇಡಿ. ಪಿಯು ಇಲಾಖೆ ದುರ್ಬಲಗೊಳಿಸಬೇಡಿ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಇಲಾಖೆ ಸ್ವತಂತ್ರವಾಗಿರಲಿ ಎಂಬ ಹಲವಾರು ಬೇಡಿಕೆಗಳನ್ನು ಇಡೇರಿಸಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ್ ಯಳಸಂಗಿ, ಎ.ಬಿ. ಪಾಟೀಲ್, ಎಸ್.ಎಂ. ಎಮ್ಮಿ, ಉಪನ್ಯಾಸಕರಾದ ಪಂಡಿತ, ನಡಗಟ್ಟಿ, ಗಿಡಗಂಟಿ, ಅಂಗಡಿ, ಬಿರಾದಾರ, ಪೂಜಾರಿ ಮತ್ತಿತರಿದ್ದರು.