- ಗೋ ಬ್ಯಾಕ್ ಅಭಿಯಾನ ಪ್ರಾರಂಭಿಸಿದ ಬಿಜೆಪಿ ಕಾರ್ಯಕರ್ತರು
- ಸ್ಥಳೀಯ ಸಂಸದ ಮತ್ತು ಶಾಸಕರಿಗೆ ಕಾರ್ಯಕರ್ತರ ಛೀಮಾರಿ
ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಕಳೆದ ವಾರ ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ ಹರಡಿದ್ದರಿಂದ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ಸೋಮಣ್ಣ ಪುತ್ರ ಡಾ. ಅರುಣ್ ಸೋಮಣ್ಣ ಅವರನ್ನು ತುಮಕೂರು ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಬಿಜೆಪಿ ನಾಯಕರ ನಿರ್ಧಾರದ ವಿರುದ್ಧ ತುಮಕೂರು ಕೇಸರಿ ಪಡೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಆಕ್ರೋಶ ಹೊರಬಿದ್ದಿದೆ.
ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ರವಿ ಶಂಕರ್ ಹೆಬ್ಬಾಕ ಅವರು ಮಂಗಳವಾರ ರಾತ್ರಿ ಪಕ್ಷದ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಡಾ. ಅರುಣ್ ಸೋಮಣ್ಣ ಅವರನ್ನು ತುಮಕೂರು ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಆ ಆದೇಶದ ವಿರುದ್ಧ ಬಿಜೆಪಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿ ಎಸ್ ಯಡಿಯೂರಪ್ಪ ವಿರೋಧಿಗಳಿಗೆ ನಮ್ಮ ಬೆಂಬಲವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ರಾತ್ರಿಯಿಂದಲೇ ಪೋಸ್ಟ್ರ್ಗಳು ಹರಿದಾಡುತ್ತಿವೆ.
ಈ ಸುದ್ದಿ ಓದಿದ್ದೀರಾ? ಅರುಣ್ಗೆ ಪಕ್ಷದ ಜವಾಬ್ದಾರಿ; ಸೋಮಣ್ಣನ ಅಸಮಾಧಾನಕ್ಕೆ ಬಿಜೆಪಿ ಮದ್ದು
ತುಮಕೂರಿನಲ್ಲಿ ಬಿಜೆಪಿ ಮುಖಂಡರ ಕೊರತೆ ಇರುವುದರಿಂದ ಬೆಂಗಳೂರಿನಿಂದ ಆಮದು ಮಾಡಿಕೊಳ್ಳಲಾಗಿದೆ. ‘ಆಮದಾಗಿ ಬಂದಿರುವ ಅರುಣ್ ಸೋಮಣ್ಣ ಅವರಿಗೆ ಸ್ವಾಗತ’, ‘ಗೋ ಬ್ಯಾಕ್ ಅರುಣ್ ಸೋಮಣ್ಣ’ ಎನ್ನುವ ಪೋಸ್ಟರ್ಗಳು ವೈರಲ್ ಆಗಿವೆ.
ಬಿಜೆಪಿ ಸಂಸದರೇ, ಶಾಸಕರೇ, ನಿಮ್ಮ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಸಾಮಾನ್ಯ ಕಾರ್ಯಕರ್ತರು. ಆದರೆ, ಯಾವುದೋ ಜಿಲ್ಲೆಯವರಿಗೆ ಉಪಾಧ್ಯಕ್ಷ ಸ್ಥಾನ ನೀಡಿರುವ ನಿಮಗೆ ಪಕ್ಷದ ಕಾರ್ಯಕರ್ತನಾಗಿ ಶತಕೋಟಿ ನಮನ ಎಂದೂ ವ್ಯಂಗ್ಯವಾಡಿದ್ದಾರೆ.