ಹತಾಶ ಪ್ರಧಾನಿಯಿಂದ 40 ಪರ್ಸೆಂಟ್ ಸರ್ಕಾರ 40 ಕಿಲೋಮೀಟರ್ ರೋಡ್ ಶೋ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಪ್ರಧಾನಿ ಮೋದಿ ರೋಡ್ ಶೋ ವಿರುದ್ಧ ವಾಗ್ದಾಳಿ ನಡೆಸಿರುವ ಜೈರಾಮ್ ರಮೇಶ್, ಮೋದಿ ಅಸ್ಪಷ್ಟ ಮನೋಭಾವದ ನಾಯಕ ಹಾಗೂ ಮತಾಂಧತೆಯ ಪ್ರಚೋದಕ. ಅವರು ಸತ್ಯಪರ ಸದಾ ಮೌನವಾಗಿರುತ್ತಾರೆ ಎಂದು ಕುಟುಕಿದ್ದಾರೆ.
ಕರ್ನಾಟಕದ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಯೋಜನೆಗಳನ್ನು ನೀಡಲು ಶೇ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ, ಬೆಲೆ ಏರಿಕೆ, ನಿರುದ್ಯೋಗ ಹಾಗೂ ಬೆಂಗಳೂರಿನ ಮೂಲಸೌಕರ್ಯಗಳ ಕಳಪೆ ಸ್ಥಿತಿ; ಇದರಲ್ಲಿ ಕೊನೆಯದ್ದು ದೀರ್ಘಕಾಲಿಕ ಸಮಸ್ಯೆ ಎಂದು ಅವರು ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.
ಈ ಬಾರಿ ಪಕ್ಷದ ಹತಾಶೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಅವರ (ಮೋದಿ) 40 ಕಿಲೋಮೀಟರ್ 40 ಪರ್ಸೆಂಟ್ ರೋಡ್ 2 ದಿನಗಳಲ್ಲಿ ಇಡೀ ನಗರವನ್ನು ಬಂಧಿಸಿ ಇಡುವಂತೆ ಮಾಡಿದೆ. ಭವಿಷ್ಯದ ನಿರ್ಣಾಯಕ ಪರೀಕ್ಷೆಗಳನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ. ಇಂತಹ ಹತಾಶ ಪ್ರಧಾನಿಯನ್ನು ನೀವು ಎಂದಾದರೂ ನೋಡಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ.