12 ವರ್ಷದ ಬಾಲಕನೊಬ್ಬ ರೈಲು ದುರಂತವನ್ನು ತಪ್ಪಿಸಿರುವ ಘಟನೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಮಾಲ್ದಾದ ರೈಲ್ವೆ ಯಾರ್ಡ್ ಬಳಿ ನಡೆದಿರುವುದು ವರದಿಯಾಗಿದೆ.
12ರ ಹರೆಯದ ಮುರ್ಸಲೀನ್ ಶೇಖ್ ರೈಲ್ವೆ ಯಾರ್ಡಿನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರ ಮಗನಾಗಿದ್ದು, ಘಟನೆಯ ವೇಳೆ ಮುರ್ಸಲೀನ್ ಕೆಲ ಕಾರ್ಮಿಕರೊಂದಿಗೆ ಯಾರ್ಡಿನಲ್ಲಿದ್ದನು.
ಕಾರ್ಮಿಕರೊಂದಿಗೆ ರೈಲ್ವೆ ಹಳಿಯ ಯಾರ್ಡ್ ನಲ್ಲಿದ್ದ ಮುರ್ಸಲೀನ್ ಶೇಖ್ ರೈಲಿನ ಕೆಲ ಹಳಿಗಳಿಗೆ ಹಾನಿ ಆಗಿರುವುದನ್ನು ನೋಡಿದ್ದಾರೆ. ಈ ವೇಳೆ ದೂರದಿಂದ ಪ್ಯಾಸೆಂಜರ್ ರೈಲೊಂದು ಬರುವುದನ್ನು ಅವನು ಗಮನಿಸಿದ್ದಾನೆ.
ಇನ್ನೇನು ಹಾನಿಗೊಳಗಾದ ಹಳಿಗಳ ಮೇಲೆ ರೈಲು ಸಂಚರಿಸಿದರೆ ಅಪಘಾತವಾಗುವುದು ಖಚಿತವೆಂದುಕೊಂಡ ಬಾಲಕ ತಾನು ಹಾಕಿದ್ದ ಕೆಂಪು ಬಣ್ಣದ ಟೀ ಶರ್ಟ್ ಅನ್ನೇ ಧ್ವಜದ ರೀತಿ ಉಪಯೋಗಿಸಿಕೊಂಡು ವೇಗದಿಂದ ಬರುತ್ತಿದ್ದ ರೈಲನ್ನು ನಿಲ್ಲಿಸಿದ್ದಾನೆ.
#Malda,WB : Mursalin Sheikh(8) saved hundreds of lives of Kanchanjunga Express train near Malda, WB, when he spotted sections of up line had shifted. He removed his red scarf and stood by the track to signal the train Pilot. The train screeched to halt avoiding mishap. pic.twitter.com/cmYw6l17Vc
— Saba Khan (@ItsKhan_Saba) September 23, 2023
ರೈಲಿನ ಚಾಲಕನಿಗೆ ಎಚ್ಚರಿಕೆ ನೀಡುವ ಸಲುವಾಗಿ ಬಾಲಕ ತನ್ನ ಟೀ ಶರ್ಟ್ ನ್ನು ಧ್ವಜದ ರೀತಿ ಬಳಸಿದ್ದನ್ನು ನೋಡಿ ಲೋಕೋಮೋಟಿವ್ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ಸಂಭವಿಸಲಿದ್ದ ದೊಡ್ಡ ಅಪಘಾತ ತಪ್ಪಿದಂತೆ ಆಗಿದೆ.
ಈ ಬಗ್ಗೆ ಮಾತನಾಡಿರುವ ಈಶಾನ್ಯ ಗಡಿ ರೈಲ್ವೆಯ ವಕ್ತಾರ ಸಬ್ಯಸಾಚಿ ಡಿ, “ಮಾಲ್ದಾದಲ್ಲಿ 12 ವರ್ಷದ ಬಾಲಕ ತನ್ನ ಕೆಂಪು ಶರ್ಟ್ ಅನ್ನು ರೈಲಿನ ಮುಂಭಾಗ ಬೀಸಿದ್ದಾನೆ. ಇದರಿಂದಾಗಿ ಲೋಕೋ-ಪೈಲಟ್ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಕಳೆದ ಒಂದು ವಾರದಿಂದ ಆ ಭಾಗದಲ್ಲಿ ಭಾರಿ ಮಳೆಯಾಗಿತ್ತು, ಇದರಿಂದಾಗಿ ರೈಲು ಹಳಿ ಹಾಳಾಗಿತ್ತು, ಬಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿದೆ, ಜತೆಗೆ ಜನರ ಜೀವವೂ ಉಳಿದಿದೆ” ಎಂದು ಅವರು ಹೇಳಿದ್ದಾರೆ.
ರೈಲ್ವೆ ಅಧಿಕಾರಿಗಳು ಬಾಲಕನ ಧೈರ್ಯವನ್ನು ಮೆಚ್ಚಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದ್ದಾರೆ. ನಗದು ಬಹುಮಾನವನ್ನು ಸಹ ನೀಡಿದ್ದಾರೆ. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.
This 8-year-old boy Mursalin Sheikh saved hundreds of lives on the Kanchanjunga Express train near West Bengal's Malda when he spotted that sections of the upline had shifted. He removed his red shirt & stood by the track to signal the trains pilot. The train was halted,,… pic.twitter.com/2MuCaEDBGE
— Gabbar (@Gabbar0099) September 26, 2023
ಸದ್ಯ ಹಾನಿಗೊಳಗಾದ ಹಳಿಗಳ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1500 ರೂ ನಗದು: ನೆಟ್ಟಿಗರಿಂದ ಟೀಕೆ
ತನ್ನ ಟೀ ಶರ್ಟ್ ಅನ್ನು ಧ್ವಜದ ರೀತಿ ಬಳಸಿ, ಅವಘಡ ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದ ಬಾಲಕ ಮುರ್ಸಲೀನ್ ಶೇಕ್ಗೆ ಕೇವಲ 1500₹ ನೀಡಲಾಗಿದೆ ಎಂದು ವರದಿಯಾಗಿದೆ. ಇದನ್ನು ಖಂಡಿಸಿರುವ ಹಲವು ಮಂದಿ ನೆಟ್ಟಿಗರು, ಇಷ್ಟೊಂದು ಸಣ್ಣ ಮೊತ್ತವನ್ನು ನೀಡಿ ಈ ರೀತಿ ಅಗೌರವ ತೋರಬಾರದಿತ್ತು. ಇಷ್ಟು ಸಣ್ಣ ಮೊತ್ತವನ್ನು ನೀಡುವ ಬದಲು ಆತನ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಿದ್ದರೆ ಇನ್ನಷ್ಟು ಬೆಲೆ ಬರುತ್ತಿತ್ತು” ಎಂದು ಪೋಸ್ಟ್ ಹಾಕುತ್ತಿದ್ದಾರೆ.
Indian Railway which spends crores for Vance Bharat flag off PR has only ₹1500 for Mursalim Sheikh who saved 100s of lives with his bravery. Shame on you Indian Railway. You’re really cheap. pic.twitter.com/VqOfBrtxws
— Aparna (@chhuti_is) September 26, 2023
ಮುರ್ಸಲೀನ್, 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ವಲಸೆ ಕಾರ್ಮಿಕ ಮೊಹಮ್ಮದ್ ಇಸ್ಮಾಯಿಲ್ ಮತ್ತು ಬೀಡಿ ಕಟ್ಟುವ ಮಾರ್ಜಿನಾ ಬೀಬಿ ಎಂಬುವವರ ಮಗ. ಮುರ್ಸಲೀನ್ಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ.
1500, ರೂಪಾಯಿಕಗಳು,! ಇಷ್ಟೊಂದು ದೊಡ್ಡ ಮೊತ್ತ ಈ ಹುಡುಗನಿಗೆ ನೀಡಬಾರದಿತ್ತು, ಭಾರತೀಯ ರೈಲ್ವೆ ಯಂತಹ ದುಸ್ಥಿತಿಗೆ ತಲುಪಿದೆ ಎಂದರೆ, ಒಂದಷ್ಟು ಒಳ್ಳೆಯ ಬಹುಮಾನ ಕೊಡಲು ಸಹ ಹಣ ಇಲ್ಲದಂತಹ ಪರಿಸ್ಥಿತಿ, ರೈಲು ಕೆಳಗೆ ಬಿದ್ದಿದ್ದರೆ ಒಂದೊತ್ತು ರೂಪಾಯಿ ಖರ್ಚಾಗುತ್ತಿತ್ತು ಅಂತೋದರಲ್ಲಿ ಈ ಹುಡುಗನಿಗೆ ಒಂದುವರೆ ಸಾವಿರ ರೂಪಾಯಿ ಕೊಟ್ಟು ಸರ್ಕಾರ ನಷ್ಟಕ್ ಒಳಗಾಗಿದೆ, ಇದಕ್ಕೆ ನೀವು ಏನಂತೀರಾ?