ನಮೀಬಿಯಾದಿಂದ ಸೆಪ್ಟೆಂಬರ್ 2022ರಂದು ಕರೆತರಲಾಗಿದ್ದ ಚೀತಾವೊಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟಿದೆ.
ಶೌರ್ಯ ಮೃತಪಟ್ಟ ಚೀತಾ, ಮಾರ್ಚ್ 2023ರಿಂದ ಇಲ್ಲಿಯವರೆಗೂ 7 ವಯಸ್ಕ ಹಾಗೂ ಮೂರು ಮರಿ ಚೀತಾಗಳು ಮೃತಪಟ್ಟಿವೆ.
“ಬೆಳಗ್ಗೆ 11ರ ವೇಳೆಗೆ ನಮ್ಮ ಪರಿಶೀಲನಾ ತಂಡವು ಶೌರ್ಯ ಚೀತಾವು ಆರೋಗ್ಯದಲ್ಲಿ ಏರುಪೇರಾಗಿ ನಿಧಾನಗತಿಯಲ್ಲಿ ನಡೆಯುತ್ತಿರುವುದನ್ನು ಗಮನಿಸಿತು. ನಂತರ ಪರಿಶೀಲನೆ ನಡೆಸಿದಾಗ ಅಸ್ವಸ್ಥ ಹಾಗೂ ನಿಶ್ಯಕ್ತಿಯಿಂದ ಬಳಲುತ್ತಿರುವುದನ್ನು ಕಂಡುಕೊಂಡಿತು. ಚಿಕಿತ್ಸೆ ನೀಡಿದ ನಂತರವೂ ಹಲವು ಸಮಸ್ಯೆಗಳು ಕಾಣಿಸಿಕೊಂಡವು. ಅಂತಿಮವಾಗಿ ಹೃದಯ ಹಾಗೂ ಶ್ವಾಸಕೋಶದ ಚಿಕಿತ್ಸೆಗೂ ಸ್ಪಂದಿಸಲಿಲ್ಲ. ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ನಂತರ ತಿಳಿಯಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಸರ್ಕಾರದ ಚೀತಾ ಯೋಜನೆಯಡಿಯಲ್ಲಿ ಎರಡು ಗುಂಪುಗಳಲ್ಲಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಒಟ್ಟು 20 ಪ್ರಾಣಿಗಳನ್ನು ಸ್ಥಳಾಂತರಿಸಲಾಯಿತು. ಮೊದಲ ಗುಂಪು ಸೆಪ್ಟೆಂಬರ್ 2022 ಹಾಗೂ ಎರಡನೇ ಗುಂಪು ಫೆಬ್ರವರಿ 2023 ರಂದು ಆಗಮಿಸಿದ್ದವು.
ಈ ಯೋಜನೆಯು ದೇಶದ ಅರಣ್ಯಗಳಲ್ಲಿ ಚೀತಾಗಳನ್ನು ಮತ್ತೆ ಪರಿಚಯಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಕಳೆದ ಏಳು ದಶಕಗಳಲ್ಲಿ ಭಾರತದಲ್ಲಿ ಚೀತಾ ಸಂತತಿ ಅವನತಿ ಹೊಂದಿವೆ.
ಆಗಸ್ಟ್ 2023 ರಲ್ಲಿ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚಿರತೆ ‘ಧಾತ್ರಿ’ ಶವವಾಗಿ ಪತ್ತೆಯಾಗಿತ್ತು. ಕಾಡಿನಲ್ಲಿ ಇನ್ನೂ ಉಳಿದಿರುವ ಎರಡು ಹೆಣ್ಣು ಚಿರತೆಗಳಲ್ಲಿ ಧಾತ್ರಿ ಕೂಡ ಒಂದಾಗಿದೆ.