ಕವಿ ಗೋಪಾಲಕೃಷ್ಣ ಅಡಿಗರ್ ಆರಂಭಿಸಿದ ಕರ್ನಾಟಕ ಪ್ರಕಾಶಕರ ಸಂಘ ಕೊಡಮಾಡುವ ‘ನಂಜನಗೂಡು ತಿರುಮಲಾಂಭ ಪ್ರಶಸ್ತಿ’ ಮತ್ತು ‘ಗೋಪಾಲಕೃಷ್ಣ ಪುಸ್ತಕ ಪರಿಚಾರಕ ಪ್ರಶಸ್ತಿ’ಗೆ ಪುಸ್ತಕ ಪ್ರೀತಿ ಬಳಗದ ರೂಪ ಮತ್ತೀಕೆರೆ ಮತ್ತು ಮೈಸೂರಿನ ಚಿಂತನ ಚಿತ್ತಾರ ಪ್ರಕಾಶನದ ನಿಂಗರಾಜ್ ಚಿತ್ತಣ್ಣವರ್ ಆಯ್ಕೆಯಾಗಿದ್ದಾರೆ.
ಕನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ‘ನಂಜನಗೂಡು ತಿರುಮಲಾಂಭ ಪ್ರಶಸ್ತಿ’ಗೆ ರೂಪ ಮತ್ತೀಕೆರೆ ಮತ್ತು ‘ಗೋಪಾಲಕೃಷ್ಣ ಪುಸ್ತಕ ಪರಿಚಾರಕ ಪ್ರಶಸ್ತಿ’ಗೆ ನಿಂಗರಾಜ್ ಚಿತ್ತಣ್ಣವರ್ ಅವರನ್ನು ಆಯ್ಕೆ ಮಾಡಲಾಗಿದೆ. ಏಪ್ರಿಲ್ 23ರಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಎಂವಿಸಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘ ತಿಳಿಸಿದೆ.
ಏಪ್ರಿಲ್ 23ರಂದು ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಎನ್ ಗಣೇಶಯ್ಯ, ಸಾಂಸ್ಕೃತಿಕ ಚಿಂತಕಿ ಎಂ.ಎಸ್ ಆಶಾದೇವಿ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲರಾಮೇಗೌಡ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ಭಾಗವಹಿಸಲಿದ್ದಾರೆ ಎಂದು ಸಂಘ ವಿವರಿಸಿದೆ.
ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮತಿಯ ಸಭೆಯಲ್ಲಿ ಪ್ರಕಾಶ್ ಕಂಬತ್ತಳ್ಳಿ. ಡಾ ವಸುಂಧರಾ ಭೂಪತಿ, ಕಾರ್ಯದರ್ಶಿ ನ. ರವಿಕುಮಾರ್, ಜಂಟಿ ಕಾರ್ಯದರ್ಶಿ ಸೃಷ್ಠಿ ನಾಗೇಶ್, ಜಿ.ಎನ್. ಮೋಹನ್, ರಮೇಶ್ ಉಡುಪ, ಕೆ ರಾಜಕುಮಾರ್, ಶ್ರೀಮತಿ ವಿಶಾಲಾಕ್ಷಿ, ಜನಾರ್ಧನ ಪೂಜಾರಿ ಇದ್ದರು.