ತುಮಕೂರಿನ ಸಿದ್ಧಗಂಗಾ ಮಠದಿಂದ ಆರಂಭವಾದ ಅತಿಥಿ ಉಪನ್ಯಾಸಕರ ಬೆಂಗಳೂರು ಚಲೋ ಪಾದಯಾತ್ರೆ ಎರಡನೇ ದಿನ ದಾಬಸ್ ಪೇಟೆದಾಟಿ ಮುಂದೆ ಸಾಗಿದೆ.
“ನಮ್ಮದು ಹಸಿವಿನ ಹೋರಾಟ, ಅತಿಥಿ ಉಪನ್ಯಾಸಕರ ಪರಿಸ್ಥಿತಿ ಗಮನಿಸಿ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತ ಗೌಡ ಕಲ್ಮನಿ ಒತ್ತಾಯಿಸಿದ್ದಾರೆ.
“ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರು ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾರೆ ಎಂಬ ಹೇಳಿಕೆ ಸಚಿವರಿಗೆ ಉನ್ನತ ಶಿಕ್ಷಣದ ಎಲ್ಲ ವಿಷಯಗಳು ಅರ್ಥವಾದಂತೆ ಕಾಣುತ್ತಿಲ್ಲ ಎಂಬುದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ” ಎಂದಿದ್ದಾರೆ.
“ಕೆಲಸದಿಂದ ತೆಗೆದು ಹಾಕುತ್ತೇವೆ ಎಂಬ ಬೆದರಿಕೆಗೆ ಬಗ್ಗುವುದಿಲ್ಲ. ಯೋಚಿಸಿ ಹೆಜ್ಜೆ ಇಡಬೇಕಿದೆ. ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅತಿಥಿ ಉಪನ್ಯಾಸಕರು ಕೆಲಸಕ್ಕೆ ಹಾಜರಾಗಿದ್ದಾರೆ ಎಂಬ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾರು ಕೂಡ ಕೆಲಸಕ್ಕೆ ಹೋಗಿಲ್ಲ. ಇದು ಹಸಿವಿನ ಹೋರಾಟ ಎಂದರು. ಸರ್ಕಾರ ಅತಿಥಿ ಉಪನ್ಯಾಸಕರನ್ನು ಸರ್ಕಾರ ಕೆಲಸದಿಂದ ತೆಗೆಯುವ ನಿರ್ಧಾರ ಮಾಡಿದ್ದರೆ ನಿರುದ್ಯೋಗ ಭಾಗ್ಯ ಕೊಟ್ಟಿದೆ ಅನ್ನೋದು ಸಾಬೀತಾಗುತ್ತದೆ. ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನ ಸಿದ್ಧಗಂಗಾ ಮಠದಿಂದ ಆರಂಭವಾದ ಅತಿಥಿ ಉಪನ್ಯಾಸಕರ ಬೆಂಗಳೂರು ಚಲೋ ಪಾದಯಾತ್ರೆ ಎರಡನೇ ದಿನ ದಾಬಸ್ ಪೇಟೆಯಿಂದ ಆರಂಭವಾಗಿದೆ. ಮೂರನೇ ದಿನ ಬುಧವಾರ ನೆಲಮಂಗಲದಿಂದ ಆರಂಭವಾಗಲಿದೆ.
ತುಮಕೂರಿನಿಂದ ಆರಂಭವಾದ ಮೊದಲ ದಿನದ ಪಾದಯಾತ್ರೆಯಲ್ಲಿ ಹಲವು ಅತಿಥಿ ಉಪನ್ಯಾಸಕರು ಅಸ್ವಸ್ಥರಾಗಿದ್ದರು. ವಿಶೇಷ ಚೇತನ ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.