ದಿ ವೈರ್ ಮಾಧ್ಯಮ ಸಂಸ್ಥೆಯ ವತಿಯಿಂದ ʼಕಾರ್ನಿವಲ್ ಆಫ್ ಫ್ರೀ ವೀಲಿಂಗ್ ಎಕ್ಸ್ಪ್ರೆಷನ್ʼ ಹೆಸರಿನ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ ಆಗಸ್ಟ್ 6 ರಂದು ಸಂಜೆ 6ರಿಂದ 8ರವರೆಗೆ ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ʼಸಾಂವಿಧಾನದ ಆದರ್ಶ ತತ್ವವಾದ ಭ್ರಾತೃತ್ವದ ಕಲ್ಪನೆಯನ್ನು ಭಾರತವು ಯಾಕೆ ಎಂದಿಗಿಂತಲೂ ಹೆಚ್ಚಾಗಿ ಅರ್ಥ ಮಾಡಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕುʼ ಎಂಬುದು ಸಂವಾದದ ವಿಷಯ. ಬಹುಭಾಷಾ ನಟ ಪ್ರಕಾಶ್ ರಾಜ್ ಅವರೊಂದಿಗೆ ಸಂವಾದವನ್ನು ದಿ ವೈರ್ನ ಸಂಪಾದಕರಾದ ಸೀಮಾ ಚಿಸ್ತಿ ನಡೆಸಿಕೊಡುವರು.
ಸಂವಾದದ ನಂತರ ಪ್ರಕಾಶ್ ರಾಜ್ ಅವರೊಂದಿಗೆ, ದಿ ವೈರ್ನ ಸಂಸ್ಥಾಪಕ ಸಂಪಾದಕರಾದ ಸಿದ್ದಾರ್ಥ್ ವರದರಾಜನ್ ಮತ್ತು ಎಂ ಕೆ ವೇಣು ಅವರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ. 8 ಗಂಟೆಯಿಂದ ಖ್ಯಾತ ನಟಿ, ಗಾಯಕಿ ಶಬನಮ್ ವಿರ್ಮಾನಿ ಅವರು ಕಬೀರ್ ಸಂಯೋಜನೆಯ ಹಾಡುಗಳನ್ನು ಹಾಡಲಿದ್ದಾರೆ.
ಇದು ಪ್ರಾಯೋಜಿತ ಕಾರ್ಯಕ್ರಮ. ಟಿಕೆಟ್ ಇದೆ ಎಂದು ಸಂಯೋಜಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ – https://insider.in/the-wire-dialogues-aug6-2023/event
ವಿಳಾಸ : ಸೇಂಟ್ ಜಾನ್ಸ್ ಅಡಿಟೋರಿಯಂ, 18ನೇ ಮುಖ್ಯರಸ್ತೆ, ಜಾನ್ ನಗರ, ಕೋರಮಂಗಲ, ಬೆಂಗಳೂರು 560034