ಕಣ್ಮುಚ್ಚಿ ಕೇಳಬಹುದಾದ ರೀತಿಯಲ್ಲಿ ಪಾಠ ಮಾಡುವ ಕೆಲವೇ ಮೇಷ್ಟ್ರುಗಳಲ್ಲಿ ಕೆ ವೈ ನಾರಾಯಣಸ್ವಾಮಿಯವರೂ ಒಬ್ಬರು. ಯಾವುದೇ ವಿಷಯವನ್ನು ಅರ್ಥ ಮಾಡಿಸಲೇಬೇಕು ಎಂಬ ಹಠವಿರದ, ಎಷ್ಟೇ ಸಂಕೀರ್ಣವಾದ ಸಂಗತಿಯನ್ನು ಕೂಡ ಅತ್ಯಂತ ಸರಳ ನಿದರ್ಶನಗಳ ಮೂಲಕ ಮಂಡಿಸುವ ಅಪರೂಪದ ಮಾತುಗಾರ. ಬಹುಶಃ ಇದಕ್ಕೆ ಕಾರಣ, ಇವರನ್ನು ಹೆಚ್ಚಾಗಿ ಪ್ರಭಾವಿಸಿದ ಜಾನಪದ. ಹೌದು... ಕೆವೈಎನ್ - ಜಾನಪದ ಸಮೃದ್ಧಿಯ ಸೀಮೆಗಳಲ್ಲಿ ಒಂದಾದ ಕೋಲಾರ ಜಿಲ್ಲೆಯವರು. ಇವರು ರಚಿಸಿದ ನಾಟಕಗಳಲ್ಲಿ 'ಅನಭಿಜ್ಞ ಶಾಕುಂತಲ' ಅತ್ಯಂತ ಜನಪ್ರಿಯ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ನಾಟಕವನ್ನಾಗಿ ರೂಪಾಂತರಿಸಿದವರು ಕೂಡ ಇವರೇ. ಅಧ್ಯಾಪನದ ಜೊತೆಗೆ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ಸದಾ ತೊಡಗಿರುವ ಇವರ ಜೀವನಪ್ರೀತಿ, ಪ್ರಾಮಾಣಿಕ ಮಾತುಗಾರಿಕೆ ಅನುಕರಣೀಯ. 'ಈದಿನ.ಕಾಮ್'ಗೆ ನೀಡಿರುವ ಈ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ, ಎರಡು ಹಾಡು ಹಾಡಿದ್ದಾರೆ ಹಾಗೂ ಒಂದು ಕವಿತೆಯನ್ನೂ ಓದಿದ್ದಾರೆ. ಬನ್ನಿ, ಜಾನಪದ ಸೀಮೆಯ ಜಾದೂಗಾರರಲ್ಲಿ ಒಬ್ಬರಾದ ಕೆವೈಎನ್ ಅವರ ಮಾತು ಆಲಿಸುವ.
ಸಂದರ್ಶನದ ಮುಖ್ಯಾಂಶಗಳು:
ಕೆ ವೈ ನಾರಾಯಣಸ್ವಾಮಿ ಅವರ ದನಿಯಲ್ಲಿ ಕೇಳಿ, ಕೋಲಾರದ ಜನಪದ ರಾಷ್ಟ್ರಗೀತೆ ‘ನ್ಯಾಸ್ತನೇ ನೆಲಬಾಲನೆ’ ಹಾಡು
‘ಧರ್ಮರಾಯನ ಕರಗ’ವು ಕುಪ್ಪೂರಿನಲ್ಲಿ ಹುಟ್ಟುಹಾಕುತ್ತಿದ್ದ ಸಂಭ್ರಮ
‘ಪಂಪ ಭಾರತ’ ನಾಟಕದ ಕರ್ಣ-ದ್ರೌಪದಿ ಭೇಟಿಯ ದೃಶ್ಯ, ‘ವಿನುರ ವೇಮ’ ನಾಟಕದ – ವೇಮನನ ಲೋಕಸಂಚಾರಕ್ಕೆ ಕಾರಣವಾಗುವ ಪ್ರಸಂಗ, ‘ಚಕ್ರರತ್ನ’ ನಾಟಕದ ಚಾವುಂಡರಾಯ ಯುದ್ಧವನ್ನು ಕೈಬಿಟ್ಟ ದೃಶ್ಯದ ವಿಶೇಷಗಳು
ದೀಪಗಳದ್ದೊಂದು ನ್ಯಾಯಾಲಯ ಏರ್ಪಾಡಾಗಿ ಆ ಊರಿನ ಮನುಷ್ಯರ ವರ್ತನೆ-ವ್ಯವಹಾರಗಳ ಚರ್ಚೆ ನಡೆಯುವ ಕೋಲಾರದ ಜನಪದ ಕತೆ
ಕಂಡದ್ದನ್ನು ಕಂಡ ಹಾಗೆ, ಕೇಳಿದ್ದನ್ನು ಕೇಳಿದ ಹಾಗೆ, ಸತ್ಯವನ್ನಷ್ಟೇ ಹೇಳುತ್ತಿದ್ದ ‘ಬೂಸಿಗ’
‘ಕೈಲ್ಯಾಂಪು – ಕೆವೈಎನ್ ಲವ್ ಸಾಂಗ್ಸ್’ ಆಲ್ಬಮ್ನ ಒಂದು ಹಾಡು – ಕೆ ವೈ ನಾರಾಯಣಸ್ವಾಮಿ ಅವರಿಂದ
ಚಿತ್ರಕಲಾ ಪರಿಷತ್ನಲ್ಲಿ ಪಾಠ ಮಾಡುವಾಗ, ವಿದ್ಯಾರ್ಥಿನಿಯೊಬ್ಬರು ತನ್ನನ್ನು ಮದುವೆ ಆಗುವಂತೆ ಕೇಳಿದ ಪ್ರಸಂಗ
ಎಂ ಎಂ ಕಲಬುರ್ಗಿ ಅವರೊಂದಿಗಿನ ಮರೆಯಲಾಗದ ಮೂರು ಪ್ರಸಂಗ
‘ಜನಪದ ಮಹಾಭಾರತ’ ಒಂದು ಅಪೂರ್ವ ಕತೆ
ಕೆ ವೈ ನಾರಾಯಣಸ್ವಾಮಿಯವರಿಂದ ಒಂದು ಕವಿತೆ
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ