- ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಪೊಲೀಸರಿಗೆ ಕುರಾನ್ ಹಂಚಲಾಗಿದೆ
- ಬೆಂಗಳೂರಿನಲ್ಲಿ ಭಯದ ವಾತಾವರಣ ನಿರ್ಮಿಸಲು ಉಗ್ರರಿಂದ ಸಂಚು
ಕಾಂಗ್ರೆಸ್ ಯಾವ ಯಾವ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಲ್ಲಿ ಉಗ್ರರ ಚಟುವಟಿಕೆ ತಾನಾಗಿಯೇ ಆರಂಭವಾಗುತ್ತದೆ. ಉಗ್ರರು ಬೆಳೆಯಲು ಸೊಂಪಾದ ವಾತಾವರಣ ಸಹಜವಾಗಿ ಸೃಷ್ಟಿಯಾಗುತ್ತದೆ ಎಂದು ಮಾಜಿ ಸಚಿವ ಆರ್ ಅಶೋಕ್ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಯಾವುದೋ ದಾಖಲೆ ತರಲು ಬೆಂಗಳೂರಿನ ಪೊಲೀಸ್ ಠಾಣೆಗೆ ಹೋಗಿದ್ದೆ. ಆ ಠಾಣೆಯಲ್ಲಿ ಎಲ್ಲ ಪೊಲೀಸರಿಗೂ ಕುರಾನ್ ಹಂಚಲಾಗಿದೆ. ಕುರಾನ್ ಹಂಚಿರುವ ಬಗ್ಗೆ ಸಹಿ ಕೂಡ ಮಾಡಿಸಿಕೊಳ್ಳಲಾಗಿದೆ ಎಂಬುದು ನನಗಿರುವ ಮಾಹಿತಿ” ಎಂದರು.
“ಕರ್ನಾಟಕದ ಪರಿಸ್ಥಿತಿ ಹೇಗೆ ಹಾಳಾಗುತ್ತಿದೆ ಎಂಬುದು ಈಗ ಅರ್ಥವಾಗುತ್ತಿದೆ. ಇದಕ್ಕೆ ಇವತ್ತು ಸಿಕ್ಕಿರುವ ಉಗ್ರರು ಸಾಕ್ಷಿ. ಇಡೀ ಬೆಂಗಳೂರನ್ನೇ ಉಡಾಯಿಸಲು ಸಂಚು ರೂಪಿಸಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಈ ಖ್ಯಾತಿಗೆ ಕಳಂಕ ತರಲು ಉಗ್ರರು ಹೊಂಚು ಹಾಕಿದ್ದರು” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ಫೋಟಕ್ಕೆ ಸಂಚು; ಐವರು ಶಂಕಿತ ಉಗ್ರರ ಬಂಧನ
“ಬೆಂಗಳೂರಿಗೆ ವಿದೇಶಿ ಬಂಡವಾಳಗಾರರು ಬರಬಾರದು, ಈ ಕಾರಣಕ್ಕಾಗಿ ಬೆಂಗಳೂರು ಖ್ಯಾತಿ ಹಾಳು ಮಾಡಲು, ಭಯದ ವಾತಾವರಣ ನಿರ್ಮಿಸಬೇಕು ಎಂಬ ದೃಷ್ಟಿಯಿಂದ ಈ ಉಗ್ರರು ಸಂಚು ಹೆಣೆದಿದ್ದರು ಎಂಬುದು ಸ್ಪಷ್ಟವಾಗಿ ಕಾಣುತ್ತದೆ” ಎಂದರು.