ಎಎಪಿ ಪಕ್ಷ ತನ್ನ ಮುಖ್ಯ ಕಚೇರಿಯಲ್ಲಿ ದೆಹಲಿ ಹೈಕೋರ್ಟ್ನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು,ಜೂ.15ರೊಳಗೆ ಖಾಲಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅತಿಕ್ರಮಣ ಎಂದು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್ ಲೋಕಸಭೆ ಚುನಾವಣೆ ಮುಗಿಯುವುದರೊಳಗೆ ಜಾಗ ಬಿಡುವಂತೆ ಗಡುವು ವಿಧಿಸಿದೆ.
ಎಎಪಿ ಪಕ್ಷವು ಪರ್ಯಾಯ ಭೂಮಿಗಾಗಿ ಕೇಂದ್ರದ ಭೂಮಿ ಮತ್ತು ಅಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಿದೆ.
ಫೆಬ್ರವರಿಯಲ್ಲಿ,ನ್ಯಾಯಾಲಯವು ವಿಸ್ತರಣಾ ಯೋಜನೆಗಾಗಿ ದೆಹಲಿ ಹೈಕೋರ್ಟ್ಗೆ ನೀಡಿರುವ ಜಾಗವನ್ನು ಎಎಪಿ ಭೂಮಿ ಅತಿಕ್ರಮಿಸಿಕೊಂಡಿರುವುದನ್ನು ಗಮನಿಸಿತು.
ಯಾರೊಬ್ಬರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?
“ಹೇಗೆ ಯಾವುದೇ ರಾಜಕೀಯ ಪಕ್ಷ ಇದರ ಮೇಲೆ ಕುಳಿತುಕೊಳ್ಳುತ್ತದೆ? ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು. ಸಾರ್ವಜನಿಕರಿಗೆ ಮತ್ತು ನಾಗರಿಕರಿಗೆ ಉಪಯೋಗವಾಗುವ ಭೂಮಿಯನ್ನು ಹೈಕೋರ್ಟ್ ಸ್ವಾಧೀನ ಪಡಿಸಿಕೊಳ್ಳಬೇಕು” ಎಂದು ಚಂದ್ರಚೂಡ್ ಹೇಳಿದರು.
“ಮುಂದಿನ ವಿಚಾರಣೆ ದಿನಾಂಕದೊಳಗಾಗಿ ದೆಹಲಿಯ ಲೋಕೋಪಯೋಗಿ ಕಾರ್ಯದರ್ಶಿ ಹಾಗೂ ಹಣಕಾಸಿನ ಕಾರ್ಯದರ್ಶಿ ಅವರು ದೆಹಲಿ ಹೈಕೋರ್ಟ್ನ ರಿಜಸ್ಟ್ರಾರ್ ಅವರೊಂದಿಗೆ ಸಭೆ ಹಮ್ಮಿಕೊಂಡು ಎಲ್ಲ ವಿಷಯಗಳನ್ನು ಪರಿಹರಿಸಿಕೊಳ್ಳಬೇಕು” ಎಂದು ಮುಖ್ಯ ನ್ಯಾಯಾಧೀಶರು ತಿಳಿಸಿದರು.