ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವಕ್ಕೆ ದೊಡ್ಡ ವರದಾನವಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಮೇಲೆ ಜನರಿಗಿರುವ ನಂಬಿಕೆಯನ್ನು ಉಳಿಸಿದೆ. ಈ ರೀತಿ ನಡೆದಿರುವುದು ದೊಡ್ಡ ವಿಷಯವಾಗಿದೆ.ಕಳೆದ ಐದರಿಂದ ಏಳು ವರ್ಷಗಳಲ್ಲಿ ನಾವು ಸುಪ್ರೀಂ ಕೋರ್ಟ್ನಿಂದ ಪಡೆದ ದೊಡ್ಡ ಐತಿಹಾಸಿಕ ತೀರ್ಪಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ವರದಾನ” ಎಂದು ಹೇಳಿದರು.
“ ಕಳೆದ ಹಲವು ವರ್ಷಗಳಿಂದ ಇದರ ಬಗ್ಗೆ ನಮಗೆ ಸಮಸ್ಯೆಯುಂಟಾಗಿತ್ತು. ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲರೂ ಇದನ್ನು ವಿರೋಧಿಸಿದ್ದರು. ನಾನು ಈ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದೆ, ಮಾಧ್ಯಮಗಳಲ್ಲಿ ಹಲವು ಬಾರಿ ಮಾತನಾಡಿದ್ದೆ. ನಾವು ಎತ್ತಿದ ಪ್ರತಿಯೊಂದು ಸಮಸ್ಯೆಗಳನ್ನು ತೀರ್ಪಿನ ಮೂಲಕ ನಿಭಾಯಿಸಲಾಗಿದೆ” ಎಂದು ಖುರೇಷಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರದ ಮಾಜಿ ಚುನಾವಣಾ ಆಯುಕ್ತರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಕೂಡ ಪ್ರಕಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ
“ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ತೀರ್ಪಿನಿಂದ ಸಂತಸವುಂಟಾಗಿದೆ. ಬ್ಯಾಕಿಂಗ್ ವ್ಯವಸ್ಥೆಯ ಮೂಲಕ ಕೊಡುಗೆಗಳನ್ನು ಪಡೆಯುವ ಕ್ರಮ ಸರಿಯಿದೆ. ಆದರೆ ನಮ್ಮ ಕಾಳಜಿಯಿರುವುದು ನೀಡಿರುವ ಕೊಡುಗೆಯನ್ನು ರಾಜಕೀಯ ಪಕ್ಷಗಳು ಏಕೆ ಗುಟ್ಟಾಗಿಡುತ್ತವೆ ಎಂಬುದು? ಎಂದು ಎಸ್ ವೈ ಖುರೇಷಿ ಪ್ರಶ್ನಿಸಿದ್ದಾರೆ.
“ದಾನ ನೀಡುವವನು ಗುಟ್ಟಾಗಿ ಇಡಬೇಕೆಂದು ಬಯಸಿದರೆ ಸಾರ್ವಜನಿಕರು ಪಾರದರ್ಶಕತೆ ಬಯಸುತ್ತಾರೆ. ಆದ್ದರಿಂದ ದಾನಿ ಏಕೆ ಗುಟ್ಟಾಗಿ ಇಡಬೇಕು? ಏಕೆಂದರೆ ಕೊಡುವ ಮತ್ತು ಕೊಳ್ಳುವುದರಲ್ಲಿ ಏನೋ ಮುಚ್ಚಿಡುತ್ತಿದ್ದಾನೆ. ಪುನಃ ಅನುಕೂಲಗಳನ್ನು ವಾಪಸ್ ಪಡೆಯುತ್ತಿದ್ದಾನೆ ಪರವಾನಗಿಗಳು, ಗುತ್ತಿಗೆಗಳು, ವಿದೇಶಿಗಳಲ್ಲಿ ಭೂಮಿ ಕೊಳ್ಳಲು ಸಾಲಗಳು. ಹಾಗಿದ್ದರೆ ಅವರು ಏಕೆ ಮುಚ್ಚಿಡಲು ಬಯಸುತ್ತಾರೆ? ಎಂದು ಮಾಜಿ ಚುನಾವಣಾ ಆಯುಕ್ತರು ಪ್ರಶ್ನಿಸಿದ್ದಾರೆ.
“ಸರ್ಕಾರ ಕೂಡ ದಾನಿಗಳನ್ನು ಗುಟ್ಟಾಗಿಡಲು ಪ್ರಯತ್ನಿಸುತ್ತಿದೆ. ಇದೇ ದಾನಿಗಳು ಕಳೆದ 70 ವರ್ಷಗಳಿಂದ ದಾನ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಗೌಪ್ಯತೆಯ ಅವಶ್ಯಕತೆ ಏನಿದೆ. ಆದ ಕಾರಣ ಈಗ ಅದನ್ನು ದೂರ ಮಾಡಲಾಗಿದೆ. ನಮ್ಮ ಪ್ರಜಾಪ್ರಭುತ್ವ ಮತ್ತೊಮ್ಮೆ ಆರೋಗ್ಯಕರವಾಗಿದೆ ಎಂದು ನನಗನಿಸುತ್ತಿದೆ” ಎಂದರು.