- ಮರ್ಯಾದಾ ಪುರುಷ ಸ್ಪೀಕರ್ ಅವರೇ ಏನು ಕ್ರಮ ಕೈಗೊಳ್ಳುತ್ತೀರಿ? ಬಹಿರಂಗವಾಗಿಯೇ ಪ್ರಶ್ನಿಸಿದ ಸಂಸದೆ
- ಸಂಸದ ದಾನಿಶ್ ಅಲಿಯನ್ನು ‘ಭಯೋತ್ಪಾದಕ’ ಎಂದು ಹೀಯಾಳಿಸಿದ್ದ ಬಿಜೆಪಿ ಸಂಸದ ರಮೇಶ್ ಬಿಧುರಿ
ಬಿಎಸ್ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಬಿಜೆಪಿಯ ಸಂಸದ ರಮೇಶ್ ಬಿಧುರಿ ಸಂಸತ್ತಿನ ವಿಶೇಷ ಅಧಿವೇಶನದಲ್ಲೇ ‘ಭಯೋತ್ಪಾದಕ’ ಎಂದು ಕರೆದು, ಹೀಯಾಳಿಸಿರುವ ಘಟನೆ ದೇಶಾದ್ಯಂತ ವಿವಾದ ಎಬ್ಬಿಸಿದೆ.
ರಮೇಶ್ ಬಿಧುರಿಯ ಈ ಹೇಳಿಕೆಯ ಬಗ್ಗೆ ಸ್ಪೀಕರ್ ವಿರುದ್ಧ ಸಿಡಿದೆದ್ದಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, “ಮರ್ಯಾದಾ ಪುರುಷ ಸ್ಪೀಕರ್ ಅವರೇ ಏನು ಕ್ರಮ ಕೈಗೊಳ್ಳುತ್ತೀರಿ?” ಎಂದು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ.
Maryadapurush @ombirlakota – feel free initiate a privilege motion against me for calling you out. Will be happy to face any committees. But am asking you here and now- what action are you taking against @rameshbidhuri?
— Mahua Moitra (@MahuaMoitra) September 22, 2023
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಮರ್ಯಾದಾ ಪುರುಷ ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಸಮರ್ಥನೆ ನೀಡಿರುವ ಮಹುವಾ ಮೊಯಿತ್ರಾ, “ನಿಮ್ಮನ್ನು ಈ ರೀತಿ ಕರೆದಿದ್ದಕ್ಕಾಗಿ ನನ್ನ ವಿರುದ್ಧ ಏನು ಬೇಕಾದರೂ ಕ್ರಮ ತೆಗೆದುಕೊಳ್ಳಲಿಕ್ಕೆ ನೀವು ಹಿಂಜರಿಯಬೇಡಿ. ಯಾವುದೇ ಸಮಿತಿಗಳನ್ನು ರಚಿಸಿದರೂ ಅದನ್ನು ಎದುರಿಸಲು ನನಗೆ ಸಂತೋಷವಾಗುತ್ತದೆ. ಆದರೆ, ನಾನು ಇಲ್ಲಿ ಮತ್ತು ಈಗ ನಿಮ್ಮನ್ನು ಕೇಳುತ್ತಿದ್ದೇನೆ, ರಮೇಶ್ ಬಿಧುರಿ ವಿರುದ್ಧ ನೀವು ಯಾವ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೀರಿ? ಹೇಳಿ” ಎಂದು ನೇರವಾಗಿ ಸವಾಲು ಹಾಕಿದ್ದಾರೆ.
ಈ ನಡುವೆ ಸಂಸದ ದಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಮೇಶ್ ಬಿಧುರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಮೇಶ್ ಬಿಧುರಿ ಅವರಿಗೆ ಎಚ್ಚರಿಕೆ ನೀಡಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
“ಇಂತಹ ವರ್ತನೆಯನ್ನು ಪುನರಾವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಬಿಜೆಪಿ ಸಂಸದನಿಗೆ ಎಚ್ಚರಿಕೆ ನೀಡಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
True paragon of impartiality @ombirlakota has apparently warned @rameshbidhuri to not do this again. Wow. While other lesser non BJP mortals like @adhirrcinc & @SanjayAzadSln suspended for far less.
— Mahua Moitra (@MahuaMoitra) September 22, 2023
Kya hua Sir- abh maryada, garima sabh bhool gaye? Shameful.
ಇದಕ್ಕೆ ಕಿಡಿಯಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ, “ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರದ್ದು ನಿಷ್ಪಕ್ಷಪಾತದ ನಿಜವಾದ ಮಾದರಿ. ರಮೇಶ್ ಬಿಧುರಿಗೆ ಮತ್ತೊಮ್ಮೆ ಹೀಗೆ ಮಾಡಬಾರದೆಂದು ಓಂ ಬಿರ್ಲಾ ಎಚ್ಚರಿಕೆ ಕೊಟ್ಟಿದ್ದಾರಂತೆ. ವಾಹ್, ಆದರೆ, ಬಿಜೆಪಿಯೇತರರಾದ ಅಧೀರ್ ರಂಜನ್ ಚೌಧರಿ & ಸಂಜಯ್ ಸಿಂಗ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಲಾಗುತ್ತದೆ. ಏನಾಯ್ತು ಸರ್, ಈಗ ಮರ್ಯಾದೆ, ಹಿರಿಮೆ ಎಲ್ಲ ಮರೆತು ಬಿಟ್ರಾ? ನಾಚಿಗೆಯಾಗ್ಬೇಕು” ಎಂದು ಸಂಸತ್ನಲ್ಲಿ ಬಿಜೆಪಿಗರ ಪಾಲಿಗೆ ಸಿಂಹಸ್ವಪ್ನವಾಗಿ ಗುರುತಿಸಿಕೊಂಡಿರುವ ಸಂಸದೆ ಮಹುವಾ ಮೊಯಿತ್ರಾ ಈ ಬಾರಿ ಲೋಕಸಭಾ ಸ್ಪೀಕರ್ ವಿರುದ್ಧವೇ ಬಹಿರಂಗವಾಗಿ ಸಿಡಿದೆದ್ದಿದ್ದಾರೆ.
This is what state sanction of hate against Muslims in India looks like. A member of Parliament from the BJP referring to a Muslim member of Parliament as a ‘terrorist’, ‘circumcised’, ‘pimp’ on the floor of the house. His colleague sitting behind laughs. Speaker unaffected pic.twitter.com/rOpvMI6ZiY
— Rana Ayyub (@RanaAyyub) September 22, 2023
ಬಿಜೆಪಿಯ ದೆಹಲಿ ಸಂಸದನಾಗಿರುವ ರಮೇಶ್ ಬಿಧುರಿ ಅವರು ಲೋಕಸಭೆಯಲ್ಲಿ ತಮ್ಮ ಮಾತಿನ ವೇಳೆ ಸಂಸತ್ತಿನ ಸಹೋದ್ಯೋಗಿ ಬಹುಜನ ಸಮಾಜ ಪಕ್ಷದ ದಾನಿಶ್ ಅಲಿ ಅವರನ್ನು “ಯೇ ಉಗ್ರವಾದಿ, ಯೇ ಆತಂಕ್ವಾದಿ, ಮುಲ್ಲಾ ಆತಂಕವಾದಿ, ಭರ್ವಾ (ವೇಶ್ಯಾವಾಟಿಕೆ ದಂಧೆ ನಡೆಸುವವ) ಮತ್ತು ಕತ್ವಾ (ಮುಂಜಿ ಮಾಡಿಸಿದವ)” ಎಂದು ಹಿಂದಿಯಲ್ಲಿ ಉಲ್ಲೇಖಿಸಿ, ಅವಮಾನಗೈದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.