(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಶರಾವತಿ ವನ್ಯಜೀವಿ ಅಭಯಾರಣ್ಯದ ಅಂಚಿನಲ್ಲಿರುವ ಪುಟ್ಟ ಊರು ಕೆರೆಕೈ. ರಂಗನಿರ್ದೇಶಕಿ ರಜನಿ ಇದೇ ಊರಿನವರು. ಕುಟುಂಬದ ತಕರಾರನ್ನೂ ಮೀರಿ ರಂಗಭೂಮಿ ಶಿಕ್ಷಣಕ್ಕಾಗಿ ನೀನಾಸಂಗೆ ಬರುತ್ತಾರೆ, ಅಲ್ಲಿ ಕೆ ವಿ ಸುಬ್ಬಣ್ಣನವರ ವಿದ್ಯಾರ್ಥಿ ಆಗುತ್ತಾರೆ. ಅಲ್ಲಿಂದ ಬದುಕಿನ ದಿಕ್ಕು ಬದಲಾಗುತ್ತದೆ. ನೀನಾಸಂ ತಿರುಗಾಟದಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ನೆಲೆ ಕಂಡುಕೊಂಡಿದ್ದು ಗದಗದಲ್ಲಿ, ಆಮೇಲೆ ಧಾರವಾಡದಲ್ಲಿ.
ಗದಗದ ಗರುಡ ನಾಟ್ಯ ಸಂಘದ ನಿರ್ದೇಶಕಿ, ಧಾರವಾಡದಲ್ಲಿ ಬಾಲಬಳಗ ಪರ್ಯಾಯ ಶಿಕ್ಷಣ ಶಾಲೆಯ ಸ್ಥಾಪನೆ ಮತ್ತು ನಿರ್ವಹಣೆ, ಗೊಂಬೆಯಾಟಕ್ಕಾಗಿ ‘ಪಪೆಟ್ ಹೌಸ್’ ಹೆಸರಿನ ಸಂಸ್ಥೆಯ ಸ್ಥಾಪನೆ… ಹೀಗೆ ಹಲವು ಜವಾಬ್ದಾರಿಯನ್ನು ಇಷ್ಟಪಟ್ಟು ನಿರ್ವಹಿಸಿದವರು ಮತ್ತು ಬಹಳ ಮುಖ್ಯವಾಗಿ, ದೇವದಾಸಿಯರ ಬದುಕುಗಳನ್ನು ಹತ್ತಿರದಿಂದ ಕಂಡು, ಅಧ್ಯಯನ ಮಾಡಿ, ಅದನ್ನು ರಂಗರೂಪಕ್ಕೆ ತರಲು ಪ್ರಯತ್ನಿಸಿದವರು. ಹೀಗೆ ನಿರಂತರ ಪ್ರಯೋಗದಲ್ಲಿ ನಿರತರಾಗಿರುವ ರಜನಿ ಕೆರೆಕೈ ಅವರ ಬದುಕಿನ ಸ್ವಾರಸ್ಯಕರ ಕತೆಗಳು ಇಲ್ಲುಂಟು – ನಿಮಗಾಗಿ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ