ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ‘ನಿಜವಾದ ಶಿವಸೇನೆ’ ಕುರಿತ ಸ್ಪೀಕರ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಶಿವಸೇನೆ (ಯುಬಿಟಿ) ಸ್ಪೀಕರ್ ಆದೇಶಕ್ಕೆ ತಾತ್ಕಾಲಿಕ ತಡೆ ಮತ್ತು ಮಹಾರಾಷ್ಟ್ರ ವಿಧಾನಸಭೆಗೆ ಹಾಜರಾಗದಂತೆ ಶಿಂಧೆ ಬಣದ ಶಾಸಕರನ್ನು ನಿರ್ಬಂಧಿಸುವ ಮಧ್ಯಂತರ ಪರಿಹಾರವನ್ನು ಕೋರಿದೆ.
ಸ್ಪೀಕರ್ ಅವರ ಆದೇಶವು “ಸ್ಪಷ್ಟ ವಾಗಿ ಕಾನೂನುಬಾಹಿರ ಮತ್ತು ವಿಕೃತವಾಗಿದೆ. ಅಲ್ಲದೆ, ಅವರು ಹತ್ತನೇ ಪರಿಚ್ಛೇದವನ್ನು ಬುಡಮೇಲು ಮಾಡಿದ್ದಾರೆ. ಸಂವಿಧಾನದ ಹತ್ತನೇ ಶೆಡ್ಯೂಲ್ ಅನ್ನು ಸಾಮಾನ್ಯವಾಗಿ ‘ಪಕ್ಷಾಂತರ-ವಿರೋಧಿ ಕಾನೂನು’ ಎಂದು ಕರೆಯಲಾಗುತ್ತದೆ ಮತ್ತು ಚುನಾಯಿತ ಪ್ರತಿನಿಧಿಗಳು ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ಪಕ್ಷಗಳನ್ನು ಬದಲಾಯಿಸುವುದಿಲ್ಲ ಎಂದು ಖಚಿತಪಡಿಸುತ್ತದೆ ಎಂದು ಶಿವಸೇನೆ (ಯುಬಿಟಿ) ತನ್ನ ಅರ್ಜಿಯಲ್ಲಿ ತಿಳಿಸಿದೆ.
“ಶಿವಸೇನಾ ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿ ನಾಯಕತ್ವ ರಚನೆಯಿಲ್ಲ ಎಂದು ಸ್ಪೀಕರ್ ಕಂಡುಕೊಂಡಿರುವುದು ಸಂಪೂರ್ಣವಾಗಿ ತಪ್ಪಾಗಿದೆ. ಬಿಜೆಪಿಯ ಬೆಂಬಲದೊಂದಿಗೆ ಏಕನಾಥ್ ಶಿಂಧೆ ಮುಖ್ಯ ಮಂತ್ರಿಯಾದರು ಎಂಬ ನಿರ್ವಿವಾದದ ಸಂಗತಿಯಿಂದ ಈ ಶಾಸಕರು ಬಿಜೆಪಿಯೊಂದಿಗಿನ ಒಡನಾಟವು ಸ್ಪಷ್ಟವಾಗಿದೆ ಎಂಬುದನ್ನು ಸ್ಪೀಕರ್ ಪರಿಗಣಿಸಲಿಲ್ಲ ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಜನವರಿ 10 ರಂದು, ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಏಕನಾಥ್ ಶಿಂಧೆ ಅವರ ಪರವಾಗಿ ತೀರ್ಪು ನೀಡಿದರು. ಶಿಂಧೆ ನೇತೃತ್ವದ ಶಿವಸೇನೆ ಬಣವು ಬಹುಪಾಲು ಪಕ್ಷದ ಶಾಸಕರ ಬೆಂಬಲವನ್ನು ಹೊಂದಿರುವುದರಿಂದ ಕಾನೂನುಬದ್ಧವಾಗಿದೆ ಎಂದು ಹೇಳಿದರು.
ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಉಭಯ ಬಣಗಳ ಯಾವುದೇ ಸದಸ್ಯರನ್ನು ಅನರ್ಹ ಗೊಳಿಸಲು ಸ್ಪೀಕರ್ ನಿರಾಕರಿಸಿದ್ದರು.
ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನಿಡಿದ್ದ ಉದ್ಧವ್ ಠಾಕ್ರೆ , ತೀರ್ಪು “ಸುಪ್ರೀಂ ಕೋರ್ಟ್ ಆದೇಶಕ್ಕೆ ಮಾಡಿದ ಅವಮಾನ” ಮತ್ತು “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಹೇಳಿದ್ದರು.
ಜೂನ್ 2022 ರಲ್ಲಿ , ಏಕನಾಥ್ ಶಿಂಧೆ, 40 ಕ್ಕೂ ಹೆಚ್ಚು ಶಿವಸೇನೆ ಶಾಸಕರು ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು , ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಿದರು.
ಏಕನಾಥ್ ಶಿಂಧೆ ನಂತರ ಬಿಜೆಪಿಯೊಂದಿಗೆ ಕೈಜೋಡಿಸಿ ನೂತನ ಮುಖ್ಯಮಂತ್ರಿಯಾದರು, ದೇವೇಂದ್ರ ಫಡ್ನವೀಸ್ ಅವರ ಉಪ ಮುಖ್ಯಮಂತ್ರಿಯಾದರು.