ಬೂಕರ್ ಪ್ರಶಸ್ತಿ ವಿಜೇತರಾದ ಖ್ಯಾತ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ 45ನೇ ‘ಯುರೋಪಿಯನ್ ಎಸ್ಸೇ ಪ್ರೈಜ್’ ನೀಡಲಾಗುತ್ತದೆ ಎಂದು ಚಾಲ್ಸ್ ವೈಲನ್ ಫೌಂಡೇಷನ್ ಪ್ರಕಟಿಸಿದೆ.
‘ಆಜಾದಿ’(2021) ಎಂಬ ಶೀರ್ಷಿಕೆಯ ಪ್ರಬಂಧಗಳ ಸಂಕಲನದ ಪ್ರೆಂಚ್ ಅನುವಾದಕ್ಕಾಗಿ ಅರುಂಧತಿ ರಾಯ್ ಅವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ಫೌಂಡೇಷನ್ ತಿಳಿಸಿದೆ.
“ಆಜಾದಿ” ಸಂಕಲನದಲ್ಲಿ ರಾಯ್ ಅವರು ‘ಬೆಳೆಯುತ್ತಿರುವ ನಿರಂಕುಶವಾದ’ದ ಜಗತ್ತಿನಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಪ್ರತಿಬಿಂಬಿಸಿದ್ದಾರೆ. ಅಲ್ಲದೆ ಈ ಪ್ರಬಂಧಗಳು ಪ್ರಸ್ತುತ ಕಾಲದಲ್ಲಿ ಕಾಲ್ಪನಿಕ ಮತ್ತು ಪರ್ಯಾಯ ಕಲ್ಪನೆಗಳ ಪಾತ್ರದ ಕುರಿತ ಹಲವು ಚಿಂತನೆಗಳನ್ನು ಒಳಗೊಂಡಿವೆ. ಫ್ಯಾಸಿಸಂ ಮತ್ತು ಅದರ ರಚನೆಯ ವಿಶ್ಲೇಷಣೆ. ಇದು ಹೇಗೆ ನಮ್ಮ ಜೀವನವನ್ನು ಹೆಚ್ಚು ಆಕ್ರಮಿಸುತ್ತಿರುವ ಸಮಸ್ಯೆ ಎಂಬುದು ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಒಳಗೊಂಡಿದೆ” ಎಂದು ಫೌಂಡೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಹಾಲು ಕಳಪೆ ಗುಣಮಟ್ಟದ್ದು ಎಂದು ವಿವಾದ ಸೃಷ್ಟಿಸಿದ ಕೇರಳ ಸಚಿವೆ
ದೇಶದ ಪ್ರಸಿದ್ಧ ಲೇಖಕಿಯಾಗಿರುವ ಅರುಂಧತಿ ರಾಯ್ ಅವರ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್”, “ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್” ಮತ್ತು “ಮೈ ಸೆಡಿಟಿಯಸ್ ಹಾರ್ಟ್” ಸೇರಿದಂತೆ ಹಲವು ಕೃತಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿವೆ.
ಸ್ವಿಟ್ಜರ್ಲೆಂಡ್ನ ಲುಸಾನ್ ನಗರದಲ್ಲಿ ಸೆಪ್ಟೆಂಬರ್ 12ರಂದು ನಡೆಯುವ ಸಮಾರಂಭದಲ್ಲಿ ಅಂದಾಜು ₹ 18 ಲಕ್ಷ ಮೊತ್ತದೊಂದಿಗೆ ಪ್ರಶಸ್ತಿಯನ್ನು ರಾಯ್ ಅವರು ಸ್ವೀಕರಿಸಲಿದ್ದಾರೆ.