ಯಾದಗಿರಿ | ಅಂಬೇಡ್ಕ‌ರ್ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ; ನವಜೀವನಕ್ಕೆ ಕಾಲಿಟ್ಟ 25 ಜೋಡಿ

Date:

ಸನಾತನ ಪರಂಪರೆಯ ವಿವಾಹಗಳು ಅಸ್ಪೃಶ್ಯತೆಯಿಂದ ಕೂಡಿವೆ. ಮೂಢನಂಬಿಕೆ, ಅಂಧಶ್ರದ್ದೆ ಗಾಢವಾಗಿ ಬೇರೂರಿರುತ್ತದೆ. ಬೌದ್ಧ ಧರ್ಮದ ವಿವಾಹ ಪದ್ಧತಿಯಲ್ಲಿ ನಿಯಮ, ಮಡಿ, ಮೈಲಿಗೆ ಇಲ್ಲ ಎಂದು ಭಾಲ್ಕಿಯ ನೌಪಾಲ ಬಂತೇಜಿ ಹೇಳಿದರು.

ಯಾದಗಿರಿ ಜಿಲ್ಲೆಯ ಸುರಪುರ ನಗರದ ದರ್ಶನ ಭೂಮಿ ಬುದ್ಧ ವಿಹಾರದಲ್ಲಿ ಬಿ ಆರ್ ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ (ಏ.14) ವಾಗಣಗೇರಾ ಗ್ರಾಮದ ಮಲ್ಲಿಕಾರ್ಜುನ ಕಟ್ಟಿಮನಿ, ಸಾಹೇಬಗೌಡ ಟಣಕೇದಾರ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೌದ್ಧ ಧರ್ಮ ಸಮಾನತೆಯನ್ನು ಬೋಧಿಸುತ್ತದೆ. ಇಲ್ಲಿ ಮೇಲು, ಕೀಳು ಇಲ್ಲ. ವೇದ, ಉಪನಿಷತ್ತು, ಮಂತ್ರೋಪದೇಶಗಳ ಜಂಜಾಟವಿಲ್ಲ. ವೈಚಾರಿಕವಾಗಿ ಸರಳ ಬದುಕು ಕಟ್ಟಿಕೊಳ್ಳುವ ಬುದ್ಧನ ಸಂದೇಶಗಳಿವೆ. ಆಡಂಬರವಿಲ್ಲದೇ ಸರಳ ಮದುವೆಯಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ದಂಪತಿ ಸುಖಕರವಾದ ಜೀವನ ನಡೆಸಬಹುದು ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಮೂಹಿಕ ವಿವಾಹದಲ್ಲಿ 25 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೌದ್ಧ ಧರ್ಮದ ಸಂಪ್ರದಾಯದಂತೆ ಸಾಮೂಹಿಕ ವಿವಾಹ ನಡೆಯಿತು.

ಮಾನಪ್ಪ ಕಟ್ಟಿಮನಿ ಧ್ವಜಾರೋಹಣ ಮಾಡಿದರು. ಮಲ್ಲಿಕಾರ್ಜುನ ಕ್ರಾಂತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದುರ್ಗಪ್ಪ ಗೋಗಿಕರ್, ಚಂದ್ರಶೇಖರ ಜಡಿಮರಳ, ಮಾನು ಗುರಿಕಾರ, ಶಿವಪ್ಪ ಸದಬ, ವೇಣುಗೋಪಾಲ ಜೇವರ್ಗಿ, ದೇವಿಂದ್ರಪ್ಪ ಪತ್ತಾರ ಮಲ್ಲಯ್ಯ ಕಮತಗಿ, ಬಸವರಾಜ ಗೋನಾಲ, ನಿಂಗಣ್ಣ ಗೋನಾಲ, ಶಿವಲಿಂಗ ಚಲುವಾದಿ, ಮಲ್ಲಿಕಾರ್ಜುನ ತಳಳ್ಳಿ, ರಾಮಚಂದ್ರ, ಶರಣಪ್ಪ ವಾಗಣಗೇರಾ, ಗೋಪಾಲ ತಳವಾರ, ಅಪ್ಪಣ್ಣ ಗಾಯಕವಾಡ, ಅಂಬಲಪ್ಪ ಹಳ್ಳಿ, ಮಲ್ಕಯ್ಯ ಶೇಲ್ಕರ್, ಭೀಮಣ್ಣ ನಾಟೀಕಾರ, ಮಹಾದೇವ, ವೀರಭದ್ರ ತಳವಾರಗೇರಾ, ಖಾಜಾ ಮೂರ್ತಿ ಬೊಮ್ಮನಳ್ಳಿ, ಹುಲಗಪ್ಪ ಅಜೀರ, ಎಂ. ಪಟೇಲ ಸೇರಿದಂತೆ ಬೈಲಕುಂಟಿ, ಚಂದಪ್ಪ ಪಂಚಮ ಸೇರಿದಂತೆ ಅನೇಕರು ಹಾಜರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಬಿಜೆಪಿ ಶ್ರೀಮಂತರ ಓಲೈಕೆ ರಾಜಕಾರಣ ಮಾಡುತ್ತಿದೆ: ಕಿಮ್ಮ‌ನೆ ರತ್ನಾಕರ

ಬಿಜೆಪಿಯಿಂದ ಶ್ರೀಮಂತರ ಓಲೈಕೆಯ ರಾಜಕಾರಣ ನಡೆಯುತ್ತಿದೆ‌. ಅದನ್ನು ತಡೆಯಬೇಕಿದೆ ಎಂದು ಮಾಜಿ...

ಬೆಂಗಳೂರು | ಬರೋಬ್ಬರಿ ₹67.5 ಕೋಟಿಗೆ ಸೇಲ್ ಆದ ಕೋರಮಂಗಲದ ನಿವೇಶನ

ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರ. ನಗರದಲ್ಲಿ ಒಂದು ಸ್ವಂತ...

ತುಮಕೂರು | ‘ದಲಿತರ ಸಂವಿಧಾನ’ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ

ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಬದಲಾವಣೆ ವಿಷಯ ಮಹತ್ವ ಪಡೆದುಕೊಂಡಿದೆ. ಸಂವಿಧಾನ ಬದಲಿಸುತ್ತೇವೆ...

ಬೆಂಗಳೂರು | ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ; ನ್ಯಾಯಕ್ಕಾಗಿ ರಾಷ್ಟ್ರಪತಿಗೆ ಕರವೇ ಮನವಿ

ಗೋವಾ ಕನ್ನಡಿಗರ ರಕ್ಷಣೆಗೆ ರಾಷ್ಟ್ರಪತಿಯರು ಮಧ್ಯೆ ಪ್ರವೇಶಿಸಿ ನ್ಯಾಯ ನೀಡಬೇಕು ಎಂದು...